BhandaryVarthe Team

BhandaryVarthe Team
Bhandary Varthe Team

Saturday 14 August 2021

ಎಸ್ .ಎಸ್ ಎಲ್.ಸಿ.ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದ ಶಿರಾಳಕೊಪ್ಪದ ದರ್ಶನ್ ಜಿ.

 ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಮಂಡಳಿಯು ಜುಲೈ ತಿಂಗಳಿನಲ್ಲಿ ನಡೆಸಿದ ಎಸ್. ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಶಿರಾಳಕೊಪ್ಪ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿ ದರ್ಶನ್ ಜಿ. 596 (95.36%) ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ .

 


ಇವರು ಶಿರಾಳಕೊಪ್ಪ ಉಳವಿ ಗಣೇಶ್ ಭಂಡಾರಿ ಮತ್ತು ಯಶೋದಾ ಜಿ ಭಂಡಾರಿ ದಂಪತಿಯ ಸುಪುತ್ರ ಇವರು ಮುಂದೆ ಅತ್ಯುನ್ನತ ಶಿಕ್ಷಣವನ್ನು ಪಡೆದು ಉತ್ತಮ ಸಾಧನೆಯನ್ನು ಮಾಡಿ ಸಮಾಜಕ್ಕೆ ಮಾದರಿಯಾಗಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಹಾರ್ದಿಕ ಶುಭ ಹಾರೈಸುತ್ತದೆ

-ಭಂಡಾರಿ ವಾರ್ತೆ

No comments:

Post a Comment