BhandaryVarthe Team

BhandaryVarthe Team
Bhandary Varthe Team

Monday 30 August 2021

ನೀಲಿ ಬಣ್ಣ ಮೂಲಕವೇ ಕೃಷ್ಣನ ಗುರುತಿಸುವಿಕೆ ಯಾಕೆ? -ಸೀತಾರಾಮ ಭಂಡಾರಿ, ಕೋಣಾಜೆ

 ಹತ್ತು ಅವತಾರಗಳಲ್ಲಿ ಕೃಷ್ಣಾವತಾರವೂ ಒಂದು. ಕೃಷ್ಣನಿಗೇಕೆ ನೀಲಿ ಬಣ್ಣ ಎಂದು ಯಾವ ಗ್ರಂಥದಲ್ಲೂ ಸರಿಯಾದ ಸ್ಪಷ್ಟೀಕರಣ ದೊರೆಯುವುದಿಲ್ಲ.

ಸ್ವಾಮಿ ವಿವೇಕಾನಂದರು ವಿಶ್ವಧರ್ಮ ಸಮ್ಮೇಳನಕ್ಕೆಂದು 1893 ರಲ್ಲಿ ಅಮೇರಿಕಾದ ಚಿಕಾಗೊ ಇಲ್ಲಿಗೆ ಭೇಟಿ ನೀಡಿದ್ದರು. ಆಗ ಅಲ್ಲಿಗೆ ಬಂದಿದ್ದ ಕ್ರೈಸ್ತ ಪಾದ್ರಿಯೊಬ್ಬರು ವಿವೇಕಾನಂದರಲ್ಲಿ ಮಾತಾಡುತ್ತಾ ಶ್ರೀ ಕೃಷ್ಣನನ್ನು ನಿವೇಕೆ ನೀಲಿ ಬಣ್ಣದ ಮೂಲಕ ಗುರುತಿಸುತಿದ್ದೀರಿ ಎಂದರಂತೆ.

ಅದಕ್ಕೆ ಶ್ರೀ ವಿವೇಕಾನಂದರು ಉತ್ತರಿಸಿದ ಪರಿ ಹೀಗಿತ್ತು:

ಭೂಮಿಯ ಪೃಕೃತಿಯನ್ನು ಹತ್ತಿರದಿಂದ ನೋಡುವಾಗ ನಮಗೆ ಹಸಿರಾಗಿ ಕಾಣುತ್ತೇವೆ. ಅದೇ ಪ್ರಕೃತಿ ಸೌಂದರ್ಯವನ್ನು ಅತ್ಯಂತ ದೂರದಿಂದ ನೋಡಿದಾಗ ಪ್ರಕೃತಿ ಹಸಿರಿನ ಬದಲು ಸಂಪೂರ್ಣ ನೀಲಿಮಯವಾಗಿ ಗೋಚರಿಸುವುದು ವಿಜ್ಞಾನ ಸತ್ಯ.

ಹಾಗೆಯೇ ಸಮುದ್ರವನ್ನು ಹತ್ತಿರದಿಂದ ನೋಡುವಾಗ ನೀರು ಹಸಿರುಮಯವಾಗಿ ಕಾಣುತ್ತದೆ. ಅತ್ಯಂತ ದೂರದಿಂದ ಸಮೂದ್ರವನ್ನು ನೋಡಿದಾಗ ಸಮುದ್ರವೂ ನೀಲಿಮಯವಾಗಿ ಕಣ್ಣಿಗೆ ಗೋಚರಿಸುತ್ತದೆ.



ಹಾಗೆಯೇ ಆಕಾಶವನ್ನು ಹತ್ತಿರದಿಂದ ನೋಡುವಾಗ ಅಲ್ಲಲ್ಲಿ ಮೋಡ ಮುಸುಕಿದಂತೆ ಕಾಣುತ್ತದೆ.ಆದರೆ ಇಡೀ ನಭೋಮಂಡಲವನ್ನು ಸಮಗ್ರವಾಗಿ ಒಟ್ಟಾಗಿ ವೀಕ್ಷಿಸಿದಾಗ ನಭೋಮಂಡಲವೂ ನೀಲಿಮಯ.

ಅಂದರೆ ಭೂಮಿ, ಸಮೂದ್ರ ಹಾಗೂ ಆಕಾಶ ಇವುಗಳ ಒಟ್ಟು ಸಂಗಮವೇ ನೀಲಿಮಯ.





ತಾಯಿಗೆ ಬಾಯೊಳು ಮೂಜಗ ತೋರಿದ ಅಂದರೆ ಈಡೀ ಭೂಮಂಡಲದ ಪ್ರತೀಕ ಶ್ರೀ ಕೃಷ್ಣ ಎಂಬುದೇ ಅರ್ಥವೆಂದು ಸ್ವಾಮಿ ವಿವೇಕಾನಂದರು ಪಾದ್ರಿಗೆ ತಿಳಿಸಿದರು ಎನ್ನುವ ಪುಸ್ತಕವನ್ನು ನಾನು ಶ್ರೀ ರಾಮಕೃಷ್ಣ ಆಶ್ರಮದಲ್ಲಿ ವಿದ್ಯಾರ್ಥಿಯಾಗಿದ್ದಾಗ ಓದಿದ ನನ್ನ ನೆನಪಿನ ಸಾರಾಂಶವನ್ನು ಈ ಸಂದರ್ಭದಲ್ಲಿ ಹಂಚಿಕೊಳ್ಳಬಯಸುತ್ತೇನೆ.

ಸ್ವಾಮಿ ವಿವೇಕಾನಂದರು ಹಿಂದೂ ಧರ್ಮವನ್ನು ವೈಜ್ಞಾನಿಕವಾಗಿ ಹೇಗೆ ಪ್ರತಿಪಾದಿಸಿದರು ಎನ್ನುವುದಕ್ಕೆ ಇದೊಂದು ಸಾಕ್ಷಿ🙏🙏🙏










-ಸೀತಾರಾಮ ಭಂಡಾರಿ, ಕೋಣಾಜೆ


No comments:

Post a Comment