BhandaryVarthe Team

BhandaryVarthe Team
Bhandary Varthe Team

Sunday 8 August 2021

ಆಟಿ ಅಮಾವಾಸ್ಯೆ ಆಚರಣೆ ತುಳು ನಾಡಿನಲ್ಲಿ ವಿಶೇಷ

 ತುಳುವರ ತುಳುನಾಡಿನಲ್ಲಿ ಪವಿತ್ರ ಹನ್ನೆರಡು ತಿಂಗಳಲ್ಲಿ ಅಮಾವಾಸ್ಯೆ ಬರುವುದು ಪಂಚಾಂಗ ಮತ್ತು ತಿಂಗಳ ಮಾಪನದಲ್ಲಿ ಕಡ್ಡಾಯವಾದರೂ ಕೆಲವು ತಿಂಗಳ ಅಮಾವಾಸ್ಯೆಗಳು ತುಳುವರಿಗೆ ಭಕ್ತಿ ಭಾವುಕತೆಯ ದಿನಗಳ ಪವಿತ್ರತೆಯ ಮತ್ತು ತೀರ್ಥಸ್ನಾನಕ್ಕೊಂದು ಹಿಂದೂ ಬಾಂಧವರ ಆರಾಧನಾ ದಿನ ಅಮವಾಸ್ಯೆಯ ದಿನ ದಲ್ಲಿ ಇದೆ. ಅಮವಾಸ್ಯೆ ಹೆದರಿಕೆಯ ಮತ್ತು ಅನಿಷ್ಠ ದಿನವೆಂದು ಜನ ಭಯಪಡುವ ದಿನವೂ ಹೌದು .

ಆದರೆ ಆಟಿ ಅಮಾವಾಸ್ಯೆಯಂದು ರೋಗ ನಿರ್ಮೂಲನಕ್ಕೆ ಆಟಿ ತೀರ್ಥಸ್ನಾನ ಮಾಡಿದರೆ ಸೋಣ ಸಂಕ್ರಾಂತಿಯ ದಿನದಂದು ತೀರ್ಥಸ್ನಾನ ಮಾಡುವ ನಂಬಿಕೆ ತುಳುವರಲ್ಲಿದೆ ಜೊತೆಗೆ ತುಳು ನಾಡಿನ ಕೃಷಿಕರು ತಾವು ಮಾಡಿದ ಗದ್ದೆಯ ಭತ್ತದ ಮತ್ತು ತರಕಾರಿ ಕೃಷಿಗೆ ಕಲ್ಲಿ ಇಡುವ ಸಂಪ್ರದಾಯ ಇಂದಿಗೂ ಗ್ರಾಮೀಣ ಭಾಗದಲ್ಲಿ ಕಂಡು ಬರುತ್ತಿರುವುದು ಬಹಳ ವಿಶೇಷವಾಗಿದೆ ಆಟಿಯಲ್ಲಿ ಮುಚ್ಚಿರುವ ಅಥವಾ ಒಂದು ಪೂಜೆಯನ್ನು ಪಡೆಯುವ ದೈವ ದೇವಸ್ಥಾನಗಳು ಸೋಣದಲ್ಲಿ ಭಯಭಕ್ತಿ ಪಲ್ಲಂಗವನ್ನು ಹೊತ್ತು ಮುಂದಿನ ವರ್ಷದ ಜವಾಬ್ದಾರಿಯೊಂದಿಗೆ ನಮ್ಮೆಲ್ಲರನ್ನು ಶುಚಿ ರ್ಬೂತಗೊಳಿಸುವ ತಿಂಗಳು ..

ಆಟಿ ಅಮವಾಸ್ಯೆಯಂದು ಹಾಲೆ (ಪಾಲೆ) ಕಷಾಯ ಕುಡಿಯುವ ಪದ್ದತಿ ಹಿಂದಿನಿಂದಲೂ ಬೆಳೆದು ಬಂದಿದೆ ..ಈ ದಿನ ಹಾಲೆ ಮರ ದಿವ್ಯ ಔಷದಿಯಿಂದ ಕೂಡಿರುತ್ತದೆ ಎಂಬುದು ಹಿಂದಿನವರ ನಂಬಿಕೆ..ಏನೇ ಇರಲಿ ಈ ಕಷಾಯವಂತು ದೇಹದ ಆರೋಗ್ಯಕ್ಕೆ ಅತ್ಯುತ್ತಮ ಎನ್ನುದರಲ್ಲಿ ಸಂದೇಹವಿಲ್ಲ..

ಕಳೆದ ವರ್ಷ ದಿಂದ ಈ ಕರೊನಾ ವೈರಸ್‌ ಭಾದೆಯಿಂದ ಎಲ್ಲರೂ ಹಾಲೆ ಮರದ ತೊಗಟೆಯ ಕಷಾಯ ಕುಡಿಯೊದು ಒಂದು ಅರ್ಥದಲ್ಲಿ ದೇಹದ ಆರೋಗ್ಯಕ್ಕೆ ಅತ್ಯುತ್ತಮವಾಗಿದೆ..

ಈ ಮರವನ್ನು ಗುರುತಿಸುವಲ್ಲಿ ನಾವು ಬಹಳ ಜಾಗರೂಕರಾಗಿರಬೇಕು ..
ಹಾಲೆ ಮರವನ್ನು ತಪ್ಪಾಗಿ ಗುರುತಿಸಿ ಮೇಲ್ನೋಟಕ್ಕೆ ಇದೆ ರೀತಿ ಕಾಣುವ ಕಾಸರಕ ಮರದ ಕಷಾಯ ಕುಡಿದು ಅನಾಹುತ ಸಂಭವಿಸಿದ ಹಲವಾರು ನಿದರ್ಶನಗಳಿವೆ..

ಉಡುಪಿ ,ದಕ್ಷಿಣ ಕನ್ನಡದಲ್ಲಿ ಒಂದು ವಿಶೇಷ ಸಂಪ್ರದಾಯವಿದೆ ಸೂರ್ಯೋದಯಕ್ಕೆ ಮೊದಲೇ ಪಾಲೆ ಮರ (ಹಾಲೆ ಮರ) ದ ಸನಿಹ ಹೋಗಿ ಬಿಳಿ ಕಲ್ಲಿನಿಂದ ಜಜ್ಜಿ ಆ ಮರದ ತೊಗಟೆಯನ್ನು ತೆಗೆದು ಬರಬೇಕು ತೊಗಟೆಯನ್ನು ತೆಗೆಯುವಾಗ ಕಬ್ಬಿಣದ ಕತ್ತಿಯನ್ನು ತಾಗಿಸಬಾರದು ಅಂದು ಮನೆಮಂದಿಯೆಲ್ಲರೂ ಆರೋಗ್ಯವರ್ಧಕವಾದ ಪಾಲೆಯ ಅತಿ ಕಹಿಯಾದ ರಸವನ್ನು ತೆಗೆದು ಅದಕ್ಕೆ ಬೆಂಕಿಯಲ್ಲಿ ಹಾಕಿದ ಬಿಳಿ ಕಲ್ಲು ಹಾಕಿ ಕುಡಿಯುತ್ತಾರೆ.


ನಂತರ ತೆಂಗಿನ ಕಾಯಿ ತುರಿ ಹಾಕಿದ ಮೆಂತೆ ಗಂಜಿ ಊಟ ಮಾಡುತ್ತಾರೆ.
ವೈಜ್ಞಾನಿಕವಾಗಿ ಈ ಆಚರಣೆಯನ್ನು ಗಮನಿಸಿದರೆ,ಪಾಲೆ ತೊಗಟೆಯ ರಸ ಒಂದು ವರ್ಷದ ಕಾಲ ಯಾವುದೇ ರೋಗ ರುಜಿನಗಳು ದೂರವಾಗುತ್ತದೆ ಎನ್ನುವಂತಹ ನಂಬಿಕೆ ಇದೆ. ಅನ್ಯ ಆಹಾರ ಸೇವನೆಗೆ ಮೂದಲು ಖಾಲಿ ಹೊಟ್ಟೆಗೆ ಸೇವಿಸುವುದು ಅತೀ ಉತ್ತಮವೆಂದು ತಿಳಿವಳಿಕೆ ಇದೆ ಈ ರೀತಿ ಸೇವಿಸುವುದರಿಂದ ಅನೇಕ ಬಗೆಯ ಔಷಧಿಗಳು ನಮ್ಮ ಶರೀರಕ್ಕೆ ಸೇರಿತು ಎಂಬ ಬಲವಾದ ನಂಬಿಕೆ .


ಅಮಾವಾಸ್ಯೆ ದಿವಸ ದಾನ ಬಿಡುವ ಒಂದು ಪದ್ಧತಿ ಇದೆ ಮನೆ ಮಂದಿಯೆಲ್ಲ ಸೇರಿಕೊಂಡು ಕೃಷಿ ಉತ್ಪನ್ನ ದವಸ ಧಾನ್ಯ ಜೋಡಿಸಿಕೊಂಡು ಬಾಳೆ ಎಲೆಯ ತುದಿಯಲ್ಲಿ ನಾಣ್ಯವನ್ನು ಇಟ್ಟು ನದಿಯಲ್ಲಿ ಹಳ್ಳಗಳಲ್ಲಿ ಮಿಂದು ತೇರು ಹೂ ಜೋಡಿಸಿ ಗಂಗಾಮಾತೆಗೆ ಅರ್ಪಿಸಲಾಗುತ್ತದೆ.ಇಷ್ಟಾರ್ಥ ಸಿದ್ಧಿಗಾಗಿ ಶನಿ ಗ್ರಹಚಾರ ಪರಿಹಾರಕ್ಕಾಗಿ ಭವಿಷ್ಯತ್ತಿನಲ್ಲಿ ಭೂಮಾತೆ ಗಂಗಾಮಾತೆ ಮನುಜ ಕುಲಕ್ಕೆ ಶಾಂತಿ ನೆಮ್ಮದಿ ದೊರಕಲೆಂದು ಕುಟುಂಬ ಸದಸ್ಯರೆಲ್ಲರೂ ಸಾಮೂಹಿಕವಾಗಿ ಪ್ರಾರ್ಥನೆ ಮಾಡೋದು ಕಟ್ಟುಪಾಡು.

ಆದರೆ ಈಗಿನ ಪಾಶ್ಚಿಮಾತ್ಯ ಸಂಸ್ಕೃತಿಯಲ್ಲಿ ಇದೆಲ್ಲ ಕಣ್ಮರೆಯಾಗುತ್ತಿರುವುದು ದುರದೃಷ್ಟ.

ಹಿಂದಿನ ಕಾಲದಲ್ಲಿ ಆಟಿತಿಂಗಳಿನಲ್ಲಿ ವಿಪರೀತ ಮಳೆ ಮಳೆಗಾಲದ ಈ ತಿಂಗಳು ಒಂದು ಹೊತ್ತಿನ ಊಟಕ್ಕೂ ಕಷ್ಟವಿತ್ತಂತೆ ಮಳೆಯಿಂದಾಗಿ ಶರೀರದಲ್ಲಿ ಕಫ ವೃದ್ಧಿಯಾಗಿ ಅಗ್ನಿ ಕುಂಠಿತವಾಗಿರುತ್ತದೆ. ಅಪೌಷ್ಟಿಕತೆಯಿಂದ ರೋಗಗಳೂ ಹೆಚ್ಚು ಆದ್ದರಿಂದ ಈ ಮಾಸದಲ್ಲಿ ಆಟಿ ಕಳಂಜ ದೈವವು ಅಮಾವಾಸ್ಯೆಯಂದು ಅನೇಕ ಬಗೆಯ ಔಷಧೀಯ ಗುಣಗಳನ್ನು ತಂದು ಮರದಲ್ಲಿರಿಸುತ್ತದೆ. ಯಾರು ತೊಗಟೆಯ ರಸವನ್ನು ನಂಬಿಕೆಯಿಂದ ಸೇವಿಸಿದ್ದರೆ ವರ್ಷಪೂರ್ತಿ ಆರೋಗ್ಯವಾಗಿರುತ್ತಾರೆ ಎಂಬ ನಂಬಿಕೆಯೂ ಬಲವಾಗಿದೆ.

ಪ್ರಾಯಶಃ ಕರಾವಳಿಯಲ್ಲಿ ಮಳೆ ಹೆಚ್ಚಿಗೆ ಬರುವ ಕಾರಣ ಈ ಸಂಪ್ರದಾಯ ಕರಾವಳಿಯಲ್ಲಿ ಮಾತ್ರ ಚಾಲ್ತಿಯಲ್ಲಿದೆ.
ಅದೇ ದಿನ ಮುಂಜಾನೆ ತೊಗಟೆ ತೆಗೆಯಲು ಹೋಗುತ್ತಾರೆ ನಸುಕಿನಲ್ಲಿ ಸರಿಯಾಗಿ ತೋರದ ಕಾರಣ ಹಾಲೆ ಮರದ ಬದಲು ಬೇರೊಂದು ಮರದ ಕೆತ್ತೆ ತಂದು ಜೀವಕ್ಕೆ ಅಪಾಯ ತಂದುಕೊಳ್ಳುವ ಸಾಧ್ಯತೆಯೂ ಇರುವುದರಿಂದ ಜಾಗರೂಕತೆ ವಹಿಸಬೇಕು. ಹಾಲೆ ಮರದ ರೀತಿ ಕಾಣುವ ಕಾಸರ್ಕ (ಕಾಸಾನು)ತುಳುವಿನಲ್ಲಿ ಕಾಯೆರ್ ಮರದ ತೊಗಟೆ ಯನ್ನು ತಂದು ಜೀವಕ್ಕೆ ಅಪಾಯ ಮಾಡಿಕೊಂಡಿರುವ ಉದಾ ಹರಣೆಗಳು ಇವೆ ಹಿಂದಿನ ದಿನವೇ ಗುರುತಿಸಿ ಮರುದಿನ ಸಂಗ್ರಹಿಸುವುದು ಉತ್ತಮ ಇಲ್ಲವಾದರೆ ಹಾಲೆ ಮರದ ಎಲೆಯನ್ನು ಸ್ಪಷ್ಟವಾಗಿ ಗುರುತಿಸಿ ಅದರ ತೊಗಟೆಯನ್ನು ತೆಗೆಯಬೇಕು.

ಹಾಲೆ ಮರವನ್ನು ಆಯುರ್ವೇದದಲ್ಲಿ ಸಪ್ತಪರ್ಣ ಎನ್ನುತ್ತಾರೆ. ಈ ಮರದ ಎಲೆಗಳಲ್ಲಿ ಏಳು ಎಲೆಗಳಿರುವ ಕಾರಣ ಸಪ್ತ ಪರ್ಣಎಂದು ಹೆಸರು ಬಂದಿರಬೇಕು ಹೀಗಾಗಿ ಸಪ್ತಪರ್ಣಿ ಎಂದೂ ಕರೆಯುತ್ತಾರೆ.

ಹಾಲೆ ಮರದಲ್ಲಿ ಜ್ವರ, ಕ್ಯಾನ್ಸರ್‌ನಂತಹ ಕಾಯಿಲೆಗಳನ್ನು ಗುಣಪಡಿಸುವ ಹಲವು ಬಗೆಯ ಔಷಧೀಯ ಗುಣವಿದೆ. ಆಯುರ್ವೇದ ಔಷಧಿಗಳಲ್ಲಿ ಇದು ಧಾರಾಳವಾಗಿ ಬಳಕೆಯಾಗುತ್ತಿದೆ. ಎಷ್ಟೋ ಔಷಧಿಗಳನ್ನು ಸೇವಿಸುವವರಿಗೆ ಆ ಔಷಧಿಯಲ್ಲಿ ಹಾಲೆ ಮರದ ಅಂಶಗಳಿವೆ ಎನ್ನುವುದೂ ಗೊತ್ತಿರುವುದಿಲ್ಲ. ಬ್ರಾಹ್ಮೀ ಮುಹೂರ್ತದಲ್ಲಿ ಮರಗಳಲ್ಲಿ ಉದ್ದೇಶಿತ ಗುಣಗಳು ಹೆಚ್ಚಿಗೆ ಇರುವುದರಿಂದ ಮುಂಜಾನೆಯೇ ತೊಗಟೆ ಸಂಗ್ರಹಿಸುವ ಕ್ರಮ ಚಾಲ್ತಿಗೆ ಬಂದಿರಬಹುದು.

ವಿಶೇಷವೆಂದರೆ ಆಯುರ್ವೇದ ಶಾಸ್ತ್ರದಲ್ಲಿ ಹೇಳಿರುವ ಈ ವಿಚಾರವನ್ನು ಆಯುರ್ವೇದ ತಿಳಿವಳಿಕೆ ಇಲ್ಲದ ಸಾಮಾನ್ಯ ವ್ಯಕ್ತಿಗಳೂ ಪಾಲಿಸುವ ಸಂಸ್ಕೃತಿ ಕಾಣಬಹುದಾಗಿದೆ.

ಗರಿಷ್ಠ ಎಷ್ಟು ಸ್ವೀಕರಿಸಬಹುದು?

ತೊಗಟೆಯನ್ನು ನೀರು ಮಿಶ್ರ ಮಾಡಿ ಜಜ್ಜಿ ರಸವನ್ನು ತೆಗೆಯುತ್ತಾರೆ ಇದನ್ನು ವ್ಯಕ್ತಿಯೊಬ್ಬ ಗರಿಷ್ಠ 24 ಮಿ.ಲೀ.
ಸೇವಿಸ ಬಹುದು ಕುದಿಸಿ ಕಷಾಯ ಮಾಡುವುದಾದರೆ ಗರಿಷ್ಠ 50 ಮಿ.ಲೀ. ಸೇವಿಸಬಹುದು. ಕೆಲವರು ಜೀರಿಗೆ, ಬೆಳ್ಳುಳ್ಳಿ, ಅರಶಿನವನ್ನು ಮಿಶ್ರ ಮಾಡಿ ಬಿಳಿ ಕಲ್ಲು ಬೆಂಕಿಯಲ್ಲಿ ಬಿಸಿ ಮಾಡಿ ಹಾಕುತ್ತಾರೆ ಜೊತೆಗೆ ಮಕ್ಕಳಿಗೆ ತಿನ್ನುಲ್ಲು ಬೆಲ್ಲವನ್ನು ಕೊಡುತ್ತಾರೆ ಆಟಿ ಕಷಾಯವನ್ನು ಕುಡಿದು ನಮ್ಮಲ್ಲಿ ಆರೋಗ್ಯ ವೃದ್ಧಿಯಾಗಲಿ ಎಂದು ಹಾರೈಸೋಣ .

-ಭಂಡಾರಿ ವಾರ್ತೆ

No comments:

Post a Comment