BhandaryVarthe Team

BhandaryVarthe Team
Bhandary Varthe Team

Wednesday 11 August 2021

ಎಸ್ ಎಸ್ ಎಲ್ ಸಿ ಯ ಅಂತಿಮ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದ ಶಿರಾಳಕೊಪ್ಪದ ಕುಮಾರಿ ವೈಷ್ಣವಿ ಎಸ್ ಭಂಡಾರಿ

 ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದ ಶ್ರೀಮತಿ ಗೀತಾ ಎಸ್ ಭಂಡಾರಿ ಮತ್ತು ಸುಧಾಕರ್ ಭಂಡಾರಿಯವರ ಪುತ್ರಿ ಕುಮಾರಿ ವೈಷ್ಣವಿ ಎಸ್ ಭಂಡಾರಿಯವರು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 621 (99.36%) ಅಂಕ ಪಡೆದುಕೊಳ್ಳುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.


ಕುಮಾರಿ ವೈಷ್ಣವಿಯವರು ಶಿಕಾರಿಪುರ ತಾಲ್ಲೂಕು ಮಳೂರಿನ ಮೊರಾರ್ಜಿ ದೇಸಾಯಿ ರೆಸಿಡೆನ್ಷಿಯಲ್ ಸ್ಕೂಲ್ ನ ವಿದ್ಯಾರ್ಥಿನಿ.


ವೈಷ್ಣವಿ ಶೈಕ್ಷಣಿಕವಾಗಿ ಇನ್ನಷ್ಟು ಹೆಚ್ಚಿನ ಸಾಧನೆ ಮಾಡಲಿ ಆ ಮೂಲಕ ಕುಟುಂಬಕ್ಕೆ ಹಾಗೂ ಸಮಾಜಕ್ಕೆ ಹೆಮ್ಮೆ ತರಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಈ ಸಂದರ್ಭದಲ್ಲಿಅಭಿನಂದನೆ ಸಲ್ಲಿಸಿ ಶುಭ ಕೋರುತ್ತಿದೆ.

-ಭಂಡಾರಿ ವಾರ್ತೆ

No comments:

Post a Comment