BhandaryVarthe Team

BhandaryVarthe Team
Bhandary Varthe Team

Monday 30 August 2021

ಶ್ರೀ ಕೃಷ್ಣ ಜನ್ಮಾಷ್ಠಮಿಯ ಮಹತ್ವ-ರಜಿತಾ ಪ್ರದೀಪ್,ಭಂಡಾರಿ , ಬೆಂಗಳೂರು 

 ಜನ್ಮಾಷ್ಟಮಿಯು ಹಿಂದೂ ಧರ್ಮದ ಪ್ರಮುಖ ಹಬ್ಬಗಳ್ಳಲ್ಲಿ ಒಂದಾಗಿದೆ. ಈ ಹಬ್ಬವನ್ನು ಭಾರತದಲ್ಲಿ ಮಾತ್ರವಲ್ಲದೆ ಇತರ ದೇಶಗಳಲ್ಲೂ ಆಚರಿಸುತ್ತಾರೆ. ಈ ಹಬ್ಬವು ಪ್ರತಿ ವರ್ಷ ಆಗಸ್ಟ್ ತಿಂಗಳಲ್ಲಿ ಬರುತ್ತದೆ.ಈ ದಿನವನ್ನು ಶ್ರೀ ಕೃಷ್ಣ ಜನ್ಮಾಷ್ಟಮಿ ಎಂದು ಆಚರಿಸುತ್ತಾರೆ. ಜನರ ಮನೆಯಲ್ಲಿ ಬಾಲ ಕೃಷ್ಣನ ತೊಟ್ಟಿಲನ್ನು ಇಡುತ್ತಾರೆ. ಕೆಲವು ರಾಜ್ಯಗಳಲ್ಲಿ ಮೊಸರು ಗಡಿಗೆಯನ್ನು ಒಡೆದು ಹಬ್ಬ ಆಚರಿಸುತ್ತಾರೆ. ಭಗವಾನ್ ಶ್ರೀ ಕೃಷ್ಣನನ್ನು ವಿಷ್ಣುವಿನ ಅತ್ಯಂತ ಶಕ್ತಿಶಾಲಿ ಅವತಾರಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಅವನ ಜನ್ಮದ ಉದ್ದೇಶ ದುಷ್ಟ ಶಕ್ತಿಗಳಿಂದ ಜಗತ್ತನ್ನು ರಕ್ಷಿಸುವುದು. ಭಗವಾನ್ ಶ್ರೀ ಕೃಷ್ಣನು ಜನರಿಗೆ ಒಳ್ಳೆಯ ಮಾರ್ಗಗಳನ್ನು ಅನುಸರಿಸಲು ಮತ್ತು ಎಂದಿಗೂ ಕೆಟ್ಟ ಕೆಲಸವನ್ನು ಮಾಡಬಾರದು ಎಂದು ತಿಳಿಸುತ್ತಾರೆ.

ಶ್ರೀ ಕೃಷ್ಣನ ಜನನ
ಜಗತ್ ಪಾಲಕನದ ವಿಷ್ಣುವಿನ 8ನೇ ಅವತಾರವೇ ಶ್ರೀ ಕೃಷ್ಣ ಅವತಾರ. ದೈವಿಕನಾದ ಶ್ರೀ ಕೃಷ್ಣನು ಸೃಷ್ಟಿಯಲ್ಲಿರುವ ದುಷ್ಟರಿಗೆ ಶಿಕ್ಷೆ ಹಾಗು ಶಿಷ್ಟರ ಪಾಲನೆಗಾಗಿ ಅವತಾರ ಎತ್ತಿದ್ದಾನೆ . ಬಾದ್ರಪದ ಮಾಸದ ಶುಕ್ಲ ಪಕ್ಷದ 8ನೇ ದಿನ ಕೃಷ್ಣ ಜನಿಸುತ್ತಾನೆ. ಆದ್ದರಿಂದ ಅಂದೇ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತದೆ.
ಮಥುರಾ ರಾಜ್ಯದಲ್ಲಿ ಕಂಸನ ದಬ್ಬಾಳಿಕೆಯಿಂದ ಜನರು ಆತಂಕದಿಂದ ಜೀವನ ನಡೆಸುತ್ತಿದ್ದರು. ಆದರೆ ಕಂಸನಿಗೆ ತನ್ನ ತಂಗಿ ದೇವಕಿಯ ಮೇಲೆ ತುಂಬಾ ಪ್ರೀತಿ ಇತ್ತು. ನಂತರ ದೇವಕಿಯ ವಿವಾಹವನ್ನು ವಸುದೇವನ ಜೊತೆ ಮಾಡಿಸುತ್ತಾನೆ. ನಂತರ ದಂಪತಿಯನ್ನು ವಸುದೇವನ ಮನೆಗೆ ಕರೆದುಕೊಂಡು ಹೋಗುವಾಗ ಆಕಾಶವಾಣಿ ನುಡಿಯುತ್ತದೆ ಹೇ ಮೂರ್ಖ ಕಂಸ ದೇವಕಿಯ 8ನೇ ಪುತ್ರನಿಂದ ನಿನ್ನ ಮೃತ್ಯು ಆಗುತ್ತದೆ ಎಂದು. ಇದನ್ನು ಕೇಳಿದ ಕಂಸ ಕೋಪಗೊಂಡು ಅವರನ್ನು ಸೆರೆಮನೆಗೆ ತಳ್ಳಿದನು. ನಂತರ ಅವರಿಗೆ ಜನಿಸಿದ ಇಲ್ಲಾ ಮಗುವನ್ನು ಕೊಲ್ಲಲು ನಿರ್ಧರಿಸುತ್ತಾನೆ. ಹೀಗೆ ಹುಟ್ಟಿದ ಎಲ್ಲಾ 7ಮಕ್ಕಳನ್ನು ಗೋಡೆಗೆ ತಳ್ಳಿ ಕೊಲ್ಲುತಾನೆ. ಮುಂದೊಂದು ದಿನ ರಾತ್ರಿ ಗುಡುಗು ಸಿಡಿಲು ಸಹಿತ ಜೋರಾಗಿ ಮಳೆ ಸುರಿಯುತ್ತದೆ. ಆಗ ದೇವಕಿಗೆ 8ನೇ ಮಗು ಜನಿಸಿತ್ತದೆ. ಆ ಮಗು ನೋಡಲು ಸುಂದರವಾಗಿಯೂ ತೇಜಸ್ಸಿನಿಂದ ಪ್ರಕಾಶಮಾನವಾಗಿರುತ್ತದೆ. ಆ ಮಗುವನ್ನು ನೋಡಿ ವಸುದೇವನು ವಿಷ್ಣುವನ್ನು ಧ್ಯಾನಿಸುತ್ತಾನೆ. ಆಗ ಕಾರಗ್ರಹದ ಬಾಗಿಲು ತೆರೆಯುತ್ತದೆ. ಅಂತ ಮಗುವನ್ನು ಎತ್ತಿಕೊಂಡು ವಾಸುದೇವ ಹೊರಗೆ ಬಂದು ಗೋಕುಲದ ಕಡೆ ಹೋಗುತ್ತಾನೆ.

ಜೋರಾಗಿ ಸುರಿಯುವ ಮಳೆಯಲ್ಲಿ ಮಗುವನ್ನು ಯಮುನಾ ತೀರಕ್ಕೆ ಬರುತ್ತಾನೆ. ಒಂದು ಬಿದುರಿನ ಬುಟ್ಟಿಯಲ್ಲಿ ಮಗುವನ್ನು ಮಲಗಿಸಿ ನದಿ ದಾಟಲು ಮುಂದಾಗುತ್ತಾನೆ. ನದಿಯ ನೀರು ವಸುದೇವ ಮೂಗಿನವರೆಗೂ ತಲುಪಿತು ಆಗ ಬುಟ್ಟಿಯಲ್ಲಿದ್ದ ಭಗವಂತ ಶ್ರೀ ಕೃಷ್ಣನ ಪಾದ ಸ್ಪರ್ಶದಿಂದ ನೀರಿನ ಪ್ರಮಾಣ ಕಡಿಮೆ ಆಗುತ್ತದೆ. ಹಿಂದಿನಿಂದ ಶೇಷಾನಾಗನು ಮಳೆಯನೀರು ಮಗುವಿಗೆ ಬೀಳದಂತೆ ತಡೆಯುತ್ತಾನೆ. ನಂತರ ವಸುದೇವ ಗೋಕುಲ ತಲುಪಿದ ಅಲ್ಲಿ ಯಶೋದೆ ಹೆಣ್ಣುಮಗುವುಗೆ ಜನ್ಮ ನೀಡಿರುತ್ತಾಳೆ ಆ ಮಗುವಿನ ಅಳುವ ದ್ವನಿ ಕೇಳಿ ವಸುದೇವ ಅಲ್ಲಿಗೆ ಹೋಗಿ ತನ್ನ ಮಗುವನ್ನು ಯಶೋದೆಯ ಬಳಿ ಇಟ್ಟು ಅವಳ ಹೆಣ್ಣು ಮಗುವನ್ನು ವಾಸುದೇವ ಕಂಸನ ಕಾರಗ್ರಹಕ್ಕೆ ತೆಗೆದುಕೊಂಡು ಹೋಗುತ್ತಾನೆ.


ದೇವಕಿಗೆ ಮಗು ಜನಿಸಿದ ವಿಷಯ ತಿಳಿದು ಕಾರಗ್ರಹಕ್ಕೆ ಬಂದ್ದು ಆ ಮಗುವನ್ನು ಗೋಡೆಗೆ ಬಿಸಾಡುತ್ತಾನೆ. ಆದರೆ ಆ ಮಗು ಮೇಲಕ್ಕೆ ಹಾರಿ ಹೋಗಿ ಏ ಕಂಸ ನಿನ್ನನ್ನು ನಾಶ ಮಾಡುವ ಬಾಲಕನ ಜನನವಾಗಿದೆ. ಆ ಬಾಲಕ ಗೋಕುಲದಲ್ಲಿ ಇದ್ದಾನೆ ಎಂದು ಹೇಳಿ ಮಾಯವಾಗುತ್ತಾಳೆ.
ಇತ್ತ ಯಶೋದೆ ಮಗುವಿಗೆ ಕೃಷ್ಣ ಎಂದು ನಾಮಕರಣ ಮಾಡುತ್ತಾಳೆ.




ಹೀಗೆ ಶ್ರೀ ಕೃಷ್ಣನ ಜನನವಾಗುತ್ತದೆ. ಕೃಷ್ಣನ ಹೆಜ್ಜೆಗುರುತುಗಳನ್ನು ಮನೆಯಲ್ಲಿ ಹಾಕಿ ಮತ್ತು ಸಣ್ಣ ಮಕ್ಕಳಿಗೆ ಕೃಷ್ಣನ ವೇಷಭೂಷಣ ಹಾಕಿಸಿ ಮನೆಯಲ್ಲಿ ಸಂಭ್ರಮ ಆಚರಿಸುತ್ತಾರೆ. ಹೀಗೆ ಶ್ರೀ ಕೃಷ್ಣ ಜನ್ಮಾಷ್ಟಮಿ ವಿಜೃಂಭಣೆಯಿಂದ ನಡೆಯುತ್ತದೆ





--ರಜಿತಾ ಪ್ರದೀಪ್,ಭಂಡಾರಿ , ಬೆಂಗಳೂರು 

No comments:

Post a Comment