BhandaryVarthe Team

BhandaryVarthe Team
Bhandary Varthe Team

Sunday 1 August 2021

ಗೆಳೆತನ - ಪ್ರಕೃತಿ ಭಂಡಾರಿ ಆಲಂಕಾರು

 ಗೆಳೆತನ.

ತಿ‌ಳಿಯಲಿಲ್ಲ ಆ ಕ್ಷಣ
ಗೆಳೆತನ ಮೂಡಲು ಕಾರಣ
ಬಾಳಿಗಿಂದು ಅದುವೇ ಆಶಾಕಿರಣ.

ಬಿಡಿಸಲಾಗದ ಅಮೂಲ್ಯ ಬಂಧನ
ಜೊತೆಗಿದ್ದರೆ ಬಾಳಲ್ಲಿ ಈ ಗೆಳೆತನ
ತಂಪೆನಿಸುವುದು ತನುಮನ.

ದೇಹವನು ತೊರೆಯುವ ಮುನ್ನ ಪ್ರಾಣ
ದೂರಕೆ ಸಾಗಲಿ ಈ ಪಯಣ
ನೀಡುತ ಜಗಕೆ ಪ್ರೇರಣ.

ಜೊತೆಯಲಿ ಸಾಗುವ ವಚನ
ಶಾಶ್ವತ ಸ್ನೇಹದ ಸಾರ್ಥಕ ಜೀವನ
ಒದಗಿಸಿದ ದೇವನಿಗೊಂದು ನನ್ನ ನಮನ.

ರಚನೆ. -ಪ್ರಕೃತಿ ಭಂಡಾರಿ ಆಲಂಕಾರು

No comments:

Post a Comment