BhandaryVarthe Team

BhandaryVarthe Team
Bhandary Varthe Team

Wednesday 11 August 2021

ಎಸ್.ಎಸ್.ಎಲ್.ಸಿ ಯಲ್ಲಿ ಅತ್ಯುತ್ತಮ ಸ್ಥಾನ ಪಡೆದ ಉಡುಪಿ ಕರಂಬಳ್ಳಿ ವಿ.ಎಂ ನಗರದ ದರ್ಶನ್ ಪಿ ಭಂಡಾರಿ.

 ಉಡುಪಿ ಕರಂಬಳ್ಳಿ ವಿ.ಎಂ ನಗರದ ಶ್ರೀಮತಿ ಪವಿತ್ರ ಭಂಡಾರಿಯವರ ಪುತ್ರ ದರ್ಶನ್ ಪಿ ಭಂಡಾರಿಯವರು ಈ ಬಾರಿಯ ಎಸ್.ಎಸ್.ಎಲ್.ಸಿ ಯ ಅಂತಿಮ ಪರೀಕ್ಷೆಯಲ್ಲಿ 557 (89.1% ) ಅಂಕ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.

ದರ್ಶನ್ ಭಂಡಾರಿಯವರು ಕುಂಜಿಬೆಟ್ಟು ಉಡುಪಿಯ ಟಿ.ಎ.ಪೈ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಯಾಗಿರುತ್ತಾರೆ.




ದರ್ಶನ್ ರವರ ಮುಂದಿನ ಶೈಕ್ಷಣಿಕ ಜೀವನ ಉಜ್ವಲವಾಗಲಿ , ಕುಟುಂಬಕ್ಕೆ ಮತ್ತು ಸಮಾಜಕ್ಕೆ ಕೀರ್ತಿ ತರಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಈ ಸಂದರ್ಭದಲ್ಲಿ ಶುಭ ಹಾರೈಸುತ್ತಿದೆ.

-ಭಂಡಾರಿ ವಾರ್ತೆ


No comments:

Post a Comment