BhandaryVarthe Team

BhandaryVarthe Team
Bhandary Varthe Team

Monday 10 July 2017

" ಕವನ "

ಸಿಗಲಾರೆ.. ಎಂದೆಂದೂ..!!
ಉರಿವ ಬೆಂಕಿಯ ಶಾಖಕ್ಕೆ
ಬೆಂದು ಹೋದ ಇರುಳು ನಾನು
ನೀ ಕೊಡುವ ಪ್ರೀತಿಯ
ಪಡೆಯಲಾರದ ಪಾಪಿ ನಾನು|
ನಿನ್ನ ಹೆಜ್ಜೆಯ ಗುರುತಿಗೆ
ನನ್ನ ಗೆಜ್ಜೆ ಸಾಕ್ಷಿಯಾಗಿದೆ
ನಿನ್ನ ಪ್ರೀತಿಯ ಸದ್ದಿಗೆ
ನನ್ನ ಮೌನ ಮಾತಾಗಿದೆ|

ಒಲವೇ ತುಂಬಿಹ ಹ್ರದಯದ ಮಾತ
ಹೇಳಲ್ಲಿಚ್ಚಿಸಿರುವೆ ಪದೇ ಪದೇ
ಯಾಕೋ ಏನೋ ಹೇಳಲಾಗುತ್ತಿಲ್ಲ
ಮೌನವು ನನ್ನ ಮೂಕಳನ್ನಾಗಿಸಿದೆ|

ಕೆರೆಯ ನಡುವಣ ಕೆಂಪು ತಾವರೆ
ನೋಡಲೆಂದು ಬಹು ಸೊಗಸು
ಪಡೆಯುವ ಸಾಹಸ ಬೇಡವೆ ಬೇಡ
ಅಲ್ಲಿ ಕಾದಿದೆ ಕೆಸರೆಂಬ ಕರಾಳತೆ|

ಬೇಡಿಕೊಳ್ಳುವೆ ಇನಿಯ
ದೂರಾಗು ನನ್ನಿಂದ
ಕಣ್ತುಂಬಿ ಕಂಬನಿ ಹರಿಸಿ
ಬಿಳ್ಕೋಡುವೆ ನಿನ್ನನ್ನ|

ಪ್ರತಿಭಾ ಭಂಡಾರಿ, ಹರಿಹರಪುರ

10 comments: