BhandaryVarthe Team

BhandaryVarthe Team
Bhandary Varthe Team

Sunday 5 September 2021

ಗುರುವಿಗೆ ಕವಿ ನಮನ - ಪ್ರಕೃತಿ ಭಂಡಾರಿ ಆಲಂಕಾರು.

 ಗುರುವಿಗೆ ಕವಿನಮನ

ಶಿಕ್ಷಕರ ದಿನಾಚರಣೆಯ ಈ ಸುದಿನ ಬರೆಯುತ್ತಿರುವೆನು ಒಂದು ಪುಟ್ಟ ಕವನ ತಿಳಿಸಲು ಗುರುಗಳಿಗೆ ಮನ ಪೂರ್ವಕ ನಮನ.



ಆಟ ಪಾಠದಿಂದ ಸೆಳೆದರು ನನ್ನ ಗಮನ ಜ್ಞಾನಾರ್ಜನೆಯಿಂದ ಅಳಿಸಿದರು ಅಜ್ಞಾನ ಸಾವಿರಾರು ಮಕ್ಕಳಿಗೆ  ಮಾಡುತ ಅಕ್ಷರದಾನ ರೂಪಿಸಿದರು ಅರ್ಥಪೂರ್ಣ ಈ ಜೀವನ.



ನನ್ನಲ್ಲಿ  ಅಡಗಿದ ಸುಪ್ತ ಪ್ರತಿಭೆಯನ್ನಗುರುತಿಸಿ ಪ್ರೋತ್ಸಾಹಿಸಿದ ನಿಮ್ಮನ್ನಜೀವನವಿಡೀ ಸ್ಮರಿಸುವೆ ಗುರುವರ್ಯರನ್ನ.

 

ಮಾಡಲು ಅಸಾಧ್ಯ ನಿಮ್ಮ ಗುಣಗಾನ ಬಾಳಲ್ಲಿ ದೈವವಿತ್ತ ಬಹುದೊಡ್ಡ ಬಹುಮಾನ ಭವಿಷ್ಯಕ್ಕೆ ಬುನಾದಿ ಹಾಕಿದ ಗುರುವಿನ ಪಾದಾರವಿಂದಕೆ ನನ್ನ ಕೋಟಿ‌-ಕೋಟಿ ನಮನ.

 


✍️ ಪ್ರಕೃತಿ ಭಂಡಾರಿ ಆಲಂಕಾರು.

No comments:

Post a Comment