BhandaryVarthe Team

BhandaryVarthe Team
Bhandary Varthe Team

Sunday, 1 August 2021

ಸ್ನೇಹ ಅತೀ ಮಧುರ ಸ್ನೇಹ ಅದು ಅಮರ - ಪೂರ್ಣಿಮಾ ಅನಿಲ್ ಭಂಡಾರಿ, ಮಣಿಪಾಲ.

ಪಾಶ್ಚಾತ್ಯ ದೇಶಗಳಿಂದ ನಮ್ಮ ದೇಶಕ್ಕೆ ಕೆಲವು ರಾಷ್ಟ್ರೀಯ ದಿನಾಚರಣೆಗಳು ಬಳುವಳಿಯಾಗಿ ಸಿಕ್ಕಿವೆ. ಅಂತಹ ದಿನಾಚರಣೆಗಳಲ್ಲಿ ಸ್ನೇಹಿತರ ದಿನಾಚರಣೆಯೂ ಒಂದು. ಸ್ನೇಹಿತರಿಗೆ ಮತ್ತು ಸ್ನೇಹಕ್ಕೆ ಗೌರವ ನೀಡಲು ಈ ದಿನಾಚರಣೆಯನ್ನು ದೇಶ ವಿದೇಶಗಳೆಲ್ಲೆಡೆ ಆಚರಿಸಲಾಗುತ್ತಿದೆ. ಹಾಲ್ ಮಾರ್ಕ್ಸ್ ಕಾರ್ಡ್ ತಯಾರಕರಾಗಿದ್ದ ಜೋಯ್ಸ್ ಹಾಲ್ ಎಂಬುವವರು ಈ ದಿನವನ್ನು ಆರಂಭಿಸಿದರು.ದಕ್ಷಿಣ ಎಷ್ಯಾದ ರಾಷ್ಟ್ರಗಳಲ್ಲಿ ಸ್ನೇಹಿತರ ದಿನವನ್ನು ಆಗಸ್ಟ್ ತಿಂಗಳ ಮೊದಲ ಭಾನುವಾರದಂದು ಆಚರಿಸಲಾಗುತ್ತದೆ.

ಕವಿ ನಾ ಕೃ ಸತ್ಯನಾರಾಯಣ ಅವರು ಬರೆದ ಸುಂದರ ಭಾವಗೀತೆಯ ಸ್ನೇಹ ಅತಿ ಮಧುರ,ಸ್ನೇಹ ಅದು ಅಮರ ಎಂಬ ಸಾಲುಗಳು ಸ್ನೇಹದ ಬಗ್ಗೆ ಎಷ್ಟೊಂದು ಅರ್ಥಗಳನ್ನು ನೀಡುತ್ತದೆ.ಸ್ನೇಹವೆಂಬುದು ಪುಟ್ಟ ಮಕ್ಕಳಿಂದ ಹಿಡಿದು ವಯೋವೃದ್ಧರಲ್ಲಿ, ಪ್ರಾಣಿ- ಪಕ್ಷಿಗಳಲ್ಲಿ, ಹೂವು-ಮುಳ್ಳುಗಳಲ್ಲಿ,ಗಿಡ-ಬಳ್ಳಿಗಳಲ್ಲಿ ಹೀಗೆ ಅನೇಕ ಸಜೀವಿ ನಿರ್ಜೀವಿಗಳ ನಡುವೆ ಬೆಸೆದಿದೆ.

ಸ್ನೇಹವು ಜೇನಹನಿಗಿಂತ ಅತ್ಯಂತ ಸಿಹಿಯಾದ ಸಂಬಂಧ. ಅದರ ನೆನಪುಗಳು ಮನದಲ್ಲಿ ಯಾವತ್ತಿಗೂ ಅಳಿಸಲಾಗದ ಅಮರ ನೆನಪುಗಳು .
ಸ್ನೇಹಿತರು ಜೀವನದ ಕಲ್ಪತರು ಎಂದರೆ ತಪ್ಪಾಗಲಾರದು. ಕಲ್ಪತರು ಎಂದರೆ ಬಸಿದ್ದೆಲ್ಲವನ್ನೂ ಕೊಡುವುದು.ಮನುಷ್ಯನ ಜೀವನವು ಬರೀ ಊಟ,ನಿದ್ರೆ,ಮದುವೆ, ಮನೆ,ಮಕ್ಕಳು,ಕೆಲಸ,ಆಸ್ತಿ,ಅಂತಸ್ತಿನ ಮೇಲೆ ನಿಂತಿಲ್ಲ.ಇವುಗಳ ಜೊತೆಗೆ ಪ್ರೀತಿ,ವಾತ್ಸಲ್ಯ, ಕರುಣೆ,ಮನಃಶಾಂತಿ,ಜೀವನದ ಸವಾಲುಗಳನೆದುರಿಸಲು ಸರಿಯಾದ ಸಲಹೆ-ಮಾರ್ಗದರ್ಶನ,ಕಷ್ಟದ ದಿನಗಳಲ್ಲಿ ಕುಗ್ಗಿದ ಮನಕ್ಕೆ ಮನೋಧೈರ್ಯ-ಶಕ್ತಿ- ಸ್ಫೂರ್ತಿ, ಸಹಾಯ ಹಸ್ತ, ತ್ಯಾಗ, ಜೀವನದ ದಾರಿಯಲಿ ಎಡವಿದಾಗ ಕಿವಿಮಾತು-ಬುದ್ದಿಮಾತು ಇವೆಲ್ಲದವುಗಳನ್ನು ಪಡೆಯುವುದರ ಮೇಲೆ ನಿಂತಿದೆ.

ಇವೆಲ್ಲವುಗಳು ಒಟ್ಟಾಗಿ ಸಿಗುವುದು ಒಬ್ಬ ಒಳ್ಳೆಯ ಆತ್ಮೀಯ ಸ್ನೇಹಿತನಿಂದ ಮಾತ್ರ.ಮನೆಯಲ್ಲಿ ಯಾರಿಗೂ ಗೊತ್ತಿರದ ವಿಷಯ ಹಾಗೂ ಹೇಳಿಕೊಳ್ಳಲಾಗದಂತಹ ವಿಷಯಗಳನ್ನು ಸ್ನೇಹಿತರಲಿ ಮಾತ್ರ ಹೇಳಲು ಸಾಧ್ಯ.


ಸ್ನೇಹಿತರ ದಿನ ವನ್ನು ಆಚರಿಸಲು ಸ್ನೇಹಿತರೆಲ್ಲರು ಒಟ್ಟಿಗೆ ಸೇರಿ ಪಾರ್ಟಿ,ಪಾರ್ಕ್,ಸಿನಿಮಾ ಅಂತ ಓಡಾಡಿ ಮೋಜು ಮಸ್ತಿ ಮಾಡುತ್ತಾ,ಬಾಲ್ಯದ ಆಟ-ಪಾಠ ತುಂಟಾಟಗಳ ಮೆಲುಕು ಹಾಕುತ್ತ, ಕೈಗೆ ಫ್ರೆಂಡ್ಶಿಪ್ ಬ್ಯಾಂಡ್ ಒಬ್ಬರಿಗೊಬ್ಬರು ಕಟ್ಟುತ್ತ,ಹೂಗುಚ್ಛ ಉಡುಗೊರೆಗಳ ನೀಡುತ್ತಾ ಆಚರಿಸಿದರೆ..ಇನ್ನು ಕೆಲವರು ಫೇಸ್ಬುಕ್ ವಾಟ್ಸಪ್ಪ್ ಗಳಲ್ಲಿ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಾ ಆಚರಿಸುತ್ತಾರೆ.


ಈಗಿನ ಕಾಲದ ಮಕ್ಕಳಿಗೆ ಟಿವಿ,ಕೈಯಲಿ ಮೊಬೈಲ್ ಇರುವ ಕಾರಣ ತಮ್ಮ ಹೆಚ್ಚಿನ ಸಮಯವನ್ನು ಅದರಲ್ಲೇ ಕಳೆಯುವುದರಿಂದ ಸ್ನೇಹ ಮತ್ತು ಸ್ನೇಹಿತರ ಬೆಲೆ ತಿಳಿದಿರುವುದು ಬಹಳ ಕಡಿಮೆ.ಆದುದರಿಂದ ಇಂದಿನ ಯುವಜನರು ಈ ಸ್ನೇಹಿತರ ದಿನ ವನ್ನು ಮಧುರವಾಗಿಸಲು ಸ್ನೇಹಿತರೆಲ್ಲರು ಸೇರಿ ಕೆಲವು ಸಮಾಜ ಕಲ್ಯಾಣ ಕಾರ್ಯಕ್ರಮಗಳು,ಮಕ್ಕಳನ್ನು ಕೂರಿಸಿಕೊಂಡು ಸ್ನೇಹದ ಮಹತ್ವದ ಕುರಿತಾದ ಸಭೆ-ಚಿಂತನೆ-ಅರಿವು-ಒಲವು ಮೂಡಿಸುವ ಪ್ರಯತ್ನ ಪಟ್ಟರೆ ಈ ಸ್ನೇಹಿತರ ದಿನ ದ ಆಚರಣೆಗೊಂದು ನಿಜವಾದ ಅರ್ಥ ಸಿಕ್ಕಿದಂತಾಗುವುದು.

 

 -ಪೂರ್ಣಿಮಾ ಅನಿಲ್ ಭಂಡಾರಿ, ಮಣಿಪಾಲ.

ಸ್ನೇಹ ಅತೀ ಮಧುರ ಸ್ನೇಹ ಅದು ಅಮರ - ಪೂರ್ಣಿಮಾ ಅನಿಲ್ ಭಂಡಾರಿ, ಮಣಿಪಾಲ.

 ಪಾಶ್ಚಾತ್ಯ ದೇಶಗಳಿಂದ ನಮ್ಮ ದೇಶಕ್ಕೆ ಕೆಲವು ರಾಷ್ಟ್ರೀಯ ದಿನಾಚರಣೆಗಳು ಬಳುವಳಿಯಾಗಿ ಸಿಕ್ಕಿವೆ. ಅಂತಹ ದಿನಾಚರಣೆಗಳಲ್ಲಿ ಸ್ನೇಹಿತರ ದಿನಾಚರಣೆಯೂ ಒಂದು. ಸ್ನೇಹಿತರಿಗೆ ಮತ್ತು ಸ್ನೇಹಕ್ಕೆ ಗೌರವ ನೀಡಲು ಈ ದಿನಾಚರಣೆಯನ್ನು ದೇಶ ವಿದೇಶಗಳೆಲ್ಲೆಡೆ ಆಚರಿಸಲಾಗುತ್ತಿದೆ. ಹಾಲ್ ಮಾರ್ಕ್ಸ್ ಕಾರ್ಡ್ ತಯಾರಕರಾಗಿದ್ದ ಜೋಯ್ಸ್ ಹಾಲ್ ಎಂಬುವವರು ಈ ದಿನವನ್ನು ಆರಂಭಿಸಿದರು.ದಕ್ಷಿಣ ಎಷ್ಯಾದ ರಾಷ್ಟ್ರಗಳಲ್ಲಿ ಸ್ನೇಹಿತರ ದಿನವನ್ನು ಆಗಸ್ಟ್ ತಿಂಗಳ ಮೊದಲ ಭಾನುವಾರದಂದು ಆಚರಿಸಲಾಗುತ್ತದೆ.

ಕವಿ ನಾ ಕೃ ಸತ್ಯನಾರಾಯಣ ಅವರು ಬರೆದ ಸುಂದರ ಭಾವಗೀತೆಯ ಸ್ನೇಹ ಅತಿ ಮಧುರ,ಸ್ನೇಹ ಅದು ಅಮರ ಎಂಬ ಸಾಲುಗಳು ಸ್ನೇಹದ ಬಗ್ಗೆ ಎಷ್ಟೊಂದು ಅರ್ಥಗಳನ್ನು ನೀಡುತ್ತದೆ.ಸ್ನೇಹವೆಂಬುದು ಪುಟ್ಟ ಮಕ್ಕಳಿಂದ ಹಿಡಿದು ವಯೋವೃದ್ಧರಲ್ಲಿ, ಪ್ರಾಣಿ- ಪಕ್ಷಿಗಳಲ್ಲಿ, ಹೂವು-ಮುಳ್ಳುಗಳಲ್ಲಿ,ಗಿಡ-ಬಳ್ಳಿಗಳಲ್ಲಿ ಹೀಗೆ ಅನೇಕ ಸಜೀವಿ ನಿರ್ಜೀವಿಗಳ ನಡುವೆ ಬೆಸೆದಿದೆ.

ಸ್ನೇಹವು ಜೇನಹನಿಗಿಂತ ಅತ್ಯಂತ ಸಿಹಿಯಾದ ಸಂಬಂಧ. ಅದರ ನೆನಪುಗಳು ಮನದಲ್ಲಿ ಯಾವತ್ತಿಗೂ ಅಳಿಸಲಾಗದ ಅಮರ ನೆನಪುಗಳು .
ಸ್ನೇಹಿತರು ಜೀವನದ ಕಲ್ಪತರು ಎಂದರೆ ತಪ್ಪಾಗಲಾರದು. ಕಲ್ಪತರು ಎಂದರೆ ಬಸಿದ್ದೆಲ್ಲವನ್ನೂ ಕೊಡುವುದು.ಮನುಷ್ಯನ ಜೀವನವು ಬರೀ ಊಟ,ನಿದ್ರೆ,ಮದುವೆ, ಮನೆ,ಮಕ್ಕಳು,ಕೆಲಸ,ಆಸ್ತಿ,ಅಂತಸ್ತಿನ ಮೇಲೆ ನಿಂತಿಲ್ಲ.ಇವುಗಳ ಜೊತೆಗೆ ಪ್ರೀತಿ,ವಾತ್ಸಲ್ಯ, ಕರುಣೆ,ಮನಃಶಾಂತಿ,ಜೀವನದ ಸವಾಲುಗಳನೆದುರಿಸಲು ಸರಿಯಾದ ಸಲಹೆ-ಮಾರ್ಗದರ್ಶನ,ಕಷ್ಟದ ದಿನಗಳಲ್ಲಿ ಕುಗ್ಗಿದ ಮನಕ್ಕೆ ಮನೋಧೈರ್ಯ-ಶಕ್ತಿ- ಸ್ಫೂರ್ತಿ, ಸಹಾಯ ಹಸ್ತ, ತ್ಯಾಗ, ಜೀವನದ ದಾರಿಯಲಿ ಎಡವಿದಾಗ ಕಿವಿಮಾತು-ಬುದ್ದಿಮಾತು ಇವೆಲ್ಲದವುಗಳನ್ನು ಪಡೆಯುವುದರ ಮೇಲೆ ನಿಂತಿದೆ.

ಇವೆಲ್ಲವುಗಳು ಒಟ್ಟಾಗಿ ಸಿಗುವುದು ಒಬ್ಬ ಒಳ್ಳೆಯ ಆತ್ಮೀಯ ಸ್ನೇಹಿತನಿಂದ ಮಾತ್ರ.ಮನೆಯಲ್ಲಿ ಯಾರಿಗೂ ಗೊತ್ತಿರದ ವಿಷಯ ಹಾಗೂ ಹೇಳಿಕೊಳ್ಳಲಾಗದಂತಹ ವಿಷಯಗಳನ್ನು ಸ್ನೇಹಿತರಲಿ ಮಾತ್ರ ಹೇಳಲು ಸಾಧ್ಯ.


ಸ್ನೇಹಿತರ ದಿನ ವನ್ನು ಆಚರಿಸಲು ಸ್ನೇಹಿತರೆಲ್ಲರು ಒಟ್ಟಿಗೆ ಸೇರಿ ಪಾರ್ಟಿ,ಪಾರ್ಕ್,ಸಿನಿಮಾ ಅಂತ ಓಡಾಡಿ ಮೋಜು ಮಸ್ತಿ ಮಾಡುತ್ತಾ,ಬಾಲ್ಯದ ಆಟ-ಪಾಠ ತುಂಟಾಟಗಳ ಮೆಲುಕು ಹಾಕುತ್ತ, ಕೈಗೆ ಫ್ರೆಂಡ್ಶಿಪ್ ಬ್ಯಾಂಡ್ ಒಬ್ಬರಿಗೊಬ್ಬರು ಕಟ್ಟುತ್ತ,ಹೂಗುಚ್ಛ ಉಡುಗೊರೆಗಳ ನೀಡುತ್ತಾ ಆಚರಿಸಿದರೆ..ಇನ್ನು ಕೆಲವರು ಫೇಸ್ಬುಕ್ ವಾಟ್ಸಪ್ಪ್ ಗಳಲ್ಲಿ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಾ ಆಚರಿಸುತ್ತಾರೆ.


ಈಗಿನ ಕಾಲದ ಮಕ್ಕಳಿಗೆ ಟಿವಿ,ಕೈಯಲಿ ಮೊಬೈಲ್ ಇರುವ ಕಾರಣ ತಮ್ಮ ಹೆಚ್ಚಿನ ಸಮಯವನ್ನು ಅದರಲ್ಲೇ ಕಳೆಯುವುದರಿಂದ ಸ್ನೇಹ ಮತ್ತು ಸ್ನೇಹಿತರ ಬೆಲೆ ತಿಳಿದಿರುವುದು ಬಹಳ ಕಡಿಮೆ.ಆದುದರಿಂದ ಇಂದಿನ ಯುವಜನರು ಈ ಸ್ನೇಹಿತರ ದಿನ ವನ್ನು ಮಧುರವಾಗಿಸಲು ಸ್ನೇಹಿತರೆಲ್ಲರು ಸೇರಿ ಕೆಲವು ಸಮಾಜ ಕಲ್ಯಾಣ ಕಾರ್ಯಕ್ರಮಗಳು,ಮಕ್ಕಳನ್ನು ಕೂರಿಸಿಕೊಂಡು ಸ್ನೇಹದ ಮಹತ್ವದ ಕುರಿತಾದ ಸಭೆ-ಚಿಂತನೆ-ಅರಿವು-ಒಲವು ಮೂಡಿಸುವ ಪ್ರಯತ್ನ ಪಟ್ಟರೆ ಈ ಸ್ನೇಹಿತರ ದಿನ ದ ಆಚರಣೆಗೊಂದು ನಿಜವಾದ ಅರ್ಥ ಸಿಕ್ಕಿದಂತಾಗುವುದು.

 - ಪೂರ್ಣಿಮಾ ಅನಿಲ್ ಭಂಡಾರಿ, ಮಣಿಪಾಲ.

 

 

 

 

ಋಣವಿರುವ ತನಕ ಸ್ನೇಹ -ಭರತ್ ರಾಜ್ ಉಜಿರೆ 

ಸ್ನೇಹ ಬರಹಕ್ಕೆ ಮೊದಲು ನೆನಪಾಗಿದ್ದು,ನನ್ನ ತೀರಾ ಆಪ್ತ ವ್ಯಕ್ತಿತ್ವ ಒಂದು. ಅವರ ಗೆಳೆತನದ ಪಯಣ -"ಬದುಕ ಕೊನೆಯ ಸಮಯ ಸಾವಿನಲ್ಲಿ ,ಸನಿಹದಲ್ಲಿ ಯಾರು ಇರದಾಗಿತ್ತು. 




ಅಲ್ಲಿಗೆ ಅವರ ಅವಶ್ಯಕತೆ ಮುಗಿದಾಗಿತ್ತು. ಋಣವಿರುವತನಕ ತಾನೇ ಪ್ರೀತಿ, ಸ್ನೇಹ, ವಿಶ್ವಾಸ ಎಲ್ಲ." ಕಾಲದ ಚಲನೆಯಲ್ಲಿ ಎಲ್ಲ ಕಳೆದು ಹೋಗುವವರೇ.ಸ್ವಸ್ಥ ನೆನಪುಗಳು ಮಾತ್ರ ಅಮರ - ಜೀವಂತ.

ಗೆಳೆತನದ ಆಯ್ಕೆಯು ನಮ್ಮ ವ್ಯಕ್ತಿತ್ವದ ನಿಲುವಿಗೆ ಬಲ ತರುವಂತಿರಬೇಕೆ ಹೊರತು ಹಾಳು ಹರಟೆಯಲ್ಲಿ ಕಾಲ ಹರಣಕ್ಕಲ್ಲ. ಆತ್ಮದಾಳದ ಎಲ್ಲ ಹೃನ್ಮನಗಳಿಗೆ ಅನಂತ ಸ್ವಸ್ಥ ಪ್ರಣಾಮಗಳು🙏.

 - ಭರತ್ ರಾಜ್ ಉಜಿರೆ 

ಗೆಳೆತನ - ಪ್ರಕೃತಿ ಭಂಡಾರಿ ಆಲಂಕಾರು

 ಗೆಳೆತನ.

ತಿ‌ಳಿಯಲಿಲ್ಲ ಆ ಕ್ಷಣ
ಗೆಳೆತನ ಮೂಡಲು ಕಾರಣ
ಬಾಳಿಗಿಂದು ಅದುವೇ ಆಶಾಕಿರಣ.

ಬಿಡಿಸಲಾಗದ ಅಮೂಲ್ಯ ಬಂಧನ
ಜೊತೆಗಿದ್ದರೆ ಬಾಳಲ್ಲಿ ಈ ಗೆಳೆತನ
ತಂಪೆನಿಸುವುದು ತನುಮನ.

ದೇಹವನು ತೊರೆಯುವ ಮುನ್ನ ಪ್ರಾಣ
ದೂರಕೆ ಸಾಗಲಿ ಈ ಪಯಣ
ನೀಡುತ ಜಗಕೆ ಪ್ರೇರಣ.

ಜೊತೆಯಲಿ ಸಾಗುವ ವಚನ
ಶಾಶ್ವತ ಸ್ನೇಹದ ಸಾರ್ಥಕ ಜೀವನ
ಒದಗಿಸಿದ ದೇವನಿಗೊಂದು ನನ್ನ ನಮನ.

ರಚನೆ. -ಪ್ರಕೃತಿ ಭಂಡಾರಿ ಆಲಂಕಾರು

ಸ್ನೇಹ ಎಂಬ ಎರಡಕ್ಷರದಲ್ಲಿ ಅದೆಂತಹ ಗಾಢತೆ - ವನಿತಾ ಅರುಣ್ ಭಂಡಾರಿ ಬಜ್ಪೆ

 ವನೊಬ್ಬನಿರ್ತಾನೆ/ಳೇ. ಎಂಥ ಸಮಯದಲ್ಲೂ 'ನಾನಿದ್ದೀನಿ ನಿಂಜೊತೆ' ಅನ್ನೋಕೆ, ಅತ್ತಾಗ ಸಂತೈಸೋಕೆ, ನಕ್ಕಾಗ ಜೊತೆಯಾಗೋಕೆ. ಈ 'ಸ್ನೇಹಿತ' ಅನ್ನೋ ಮೂರಕ್ಷರವನ್ನು ಒಂದು ವ್ಯಕ್ತಿಯಲ್ಲಿ ಕಟ್ಟಿಹಾಕೋದು ಕಷ್ಟವೇ. ಆಗಸ್ಟ್ ತಿಂಗಳ ಮೊದಲ ಭಾನುವಾರ(ಈ ಬಾರಿ ಆಗಸ್ಟ್ 01) ಬರುತ್ತಿದ್ದಂತೆಯೇ 'ಹ್ಯಾಪಿ ಫ್ರೆಂಡ್ಶಿಪ್ ಡೇ' ಎಂದು ಕೈಕುಲುಕಿದ ಮಾತ್ರಕ್ಕೆ ಅವನ/ಅವಳ ಋಣ ತೀರಿಹೋಗೋಲ್ಲ!

ಪ್ರತಿ ವ್ಯಕ್ತಿಯ ಬದುಕಿನಲ್ಲೂ ಈ ಸ್ನೇಹ ಪ್ರಪಂಚ ಎಷ್ಟು ವಿಶಾಲ! ಆಗಷ್ಟೇ ಭೂಮಿ ಎಂಬ ಸುಂದರ ಪ್ರಪಂಚಕ್ಕೆ ಬಂದು ಕಣ್ಬಿಟ್ಟ ಕ್ಷಣ... ಪುಟ್ಟ ಕೈಮೇಲೆ ಅಮ್ಮನ ಅಕ್ಕರೆಯ ಬೆರಳು ಆಡಿದರೆ ಈ ಅಮ್ಮಂಗಿಂತ ಬೇರೆ ಸ್ನೇಹಿತೆ ಇಲ್ಲ! ಪುಟ್ಟ ಪುಟ್ಟ ಹೆಜ್ಜೆ ಇಡುವಾಗಲೂ ಬೀಳದಂತೆ ಕಣ್ಣಲ್ಲಿ ಕಣ್ಣಿಟ್ಟು ನೋಡುವಾಗ ಈ ಅಪ್ಪನ ಅಕ್ಕರೆಗಿಂತ ಮಿಗಿಲಾದ ಸ್ನೇಹವಿಲ್ಲ! ಯಾರೋ ಕೊಟ್ಟ ಮಿಠಾಯಿಯಲ್ಲಿ, ಅರ್ಧ ಭಾಗವನ್ನು ಗುಬ್ಬಿ ಎಂಜಲು ಮಾಡಿ ತನ್ನ ಪುಟ್ಟ ಕೈಯಲ್ಲಿಟ್ಟುಕೊಂಡು ತಿನ್ನಿಸುವಾಗ ಈ ಅಕ್ಕನಿಗಿಂತ ಬೇರೆ ಸ್ನೇಹಿತರಿಲ್ಲ! ತುಂಟಾಟವಾಡುವ ತಂಗಿ, ಸಲಹೆ ನೀಡುವ ಅಣ್ಣ, ಕತೆ ಹೇಳುವ ಅಜ್ಜ-ಅಜ್ಜಿ... ಎಲ್ಲರೂ ಒಂದಿಲ್ಲೊಂದು ರೀತಿಯಲ್ಲೇ ಈ ಸ್ನೇಹ ಪ್ರಪಂಚದ ಆಜೀವ ಸದಸ್ಯರೇ! ಕಾಯಾ ವಾಚಾ ಮನಸಾ ಜೊತೆಯಲ್ಲಿರುತ್ತೇನೆಂದು ಸಪ್ತಪದಿ ತುಳಿದ ಸಂಗಾತಿಯೂ ಆತ್ಮಸ್ನೇಹಿತನೇ/ಳೇ‌ .....

ಅಪ್ಪಟ ಸ್ನೇಹವೆಂದರೆ ಅಷ್ಟು ಮಾತ್ರವಲ್ಲ, ನಮ್ಮ ತಪ್ಪುಗಳನ್ನು ಗುರುತಿಸಿ ಸರಿಪಡಿಸಲು, ಸರಿಯಾದ ಪಾಠದ ಮೂಲಕ ಉತ್ತಮ ವ್ಯಕ್ತಿಯಾಗಿ ಸಮಾಜದಲ್ಲಿ ಬಾಳಲು ನೆರವಾಗುವುದು ಮುಖ್ಯವಾಗಿದೆ. ನಿಮ್ಮ ವಯಸ್ಸನ್ನು ಸ್ನೇಹಿತರಿಂದ ಅಳೆಯಿರಿ, ವರ್ಷಗಳಿಂದಲ್ಲ ಎಂಬ ಆಂಗ್ಲ ನಾಣ್ಣುಡಿಯಿದೆ.

ಹಾಗೆ ಹೇಳುವುದಕ್ಕೆ ಹೋದರೆ ಈ ಬದುಕಿಗೆ ಎಷ್ಟೆಲ್ಲ ಸ್ನೇಹಿತರು..!

ಎನಿತು ಜೀವದಲಿ ಎನಿತು ಜೀವರಿಗೆ ಎನಿತು ನಾವು ಋಣಿಯೋ ಅರಿತು ನೋಡಿದರೆ ಬಾಳು ಎಂಬುದಿದು ಋಣದ ರತ್ನಗಣಿಯೋ
ಎಂಬ ರಾಷ್ಟ್ರ ಕವಿ ಜಿ ಎಸ್ ಶಿವರುದ್ರಪ್ಪ ಅವರ ಸಾಲಿನಂತೆ, ಈ ಪ್ರಪಂಚದಲ್ಲಿ ಪ್ರತಿ ಹೆಜ್ಜೆಯಲ್ಲೂ ಸಿಕ್ಕ ಅದೆಷ್ಟು ಜನರಿಗೆ ನಾವು ಋಣಿಯಾಗಬೇಕೋ. ಅವರೆಲ್ಲರೂ ಒಂದಿಲ್ಲೊಂದು ರೀತಿಯಲ್ಲಿ ನಮ್ಮ ಸ್ನೇಹಿತರೇ!


ಮನುಷ್ಯ ಮಾತ್ರ ಗೆಳೆತನ/ ಸ್ನೇಹ ಸಂಪಾದಿಸುವುದಲ್ಲ ಪ್ರಾಣಿ ಪಕ್ಷಿಗಳು ಕೂಡ ಸ್ನೇಹಿತರನ್ನು ಆರಿಸಿಕೊಳ್ಳುತ್ತವೆ.

ಬಡ ಕುಚೇಲ ತಂದ ಹಿಡಿ ಅವಲಕ್ಕಿಯನ್ನೇ ಮೃಷ್ಟಾನ್ನ ಎಂಬಂತೆ ತಿಂದನಂತೆ ಕೃಷ್ಣ! ಜಗದೊಡೆಯ ಎಂದು ವಿಶ್ವವೇ ಪೂಜಿಸುವ ಕೃಷ್ಣ, ಅವತಾರ ಪುರುಷ ಮುರಾರಿ ಕರಗಿ ಹೋಗಿದ್ದು ಆ ಹಿಡಿ ಅವಲಕ್ಕಿಗೆ, ಅದರೊಳಗೆ ಹೂತಿದ್ದ ನಿಸ್ವಾರ್ಥ ಸ್ನೇಹಕ್ಕೆ! .

ಕರ್ಣನ ಕೈ ತಾಕಿ ಭಾನುಮತಿಯ ಮುತ್ತಿನ ಹಾರ ಹರಿದುಬಿದ್ದಾಗ, 'ಪೋಣಿಸಿಕೊಡಲಾ, ಆರಿಸಿಕೊಡಲಾ?' ಎಂದು ಕೇಳಿದನಂತೆ ದುರ್ಯೋಧನ! ದುರ್ಯೋಧನ ಎಂಥ ದುಷ್ಟನೇ ಇದ್ದಿರಬಹುದು. ಕರ್ಣನ ಬಗೆಗೆ ಅವನಲ್ಲಿದ್ದ ಸ್ನೇಹತ್ವ ಮಾತ್ರ ಎಂದಿಗೂ ಮಾದರಿಯೇ.

ಕೇನ ರತ್ನಮಿದಂ ಸೃಷ್ಟಂ ಮಿತ್ರಮಿತ್ಯಕ್ಷರದ್ವಯಂ ಎಂಬಂತೆ ಮಿತ್ರ ಎಂಬ ರತ್ನವನ್ನು ಯಾರು ಸೃಷ್ಟಿಸಿದರೋ.

ನಿಜವಾಗಿಯೂ ಅವರಂಥ ಮಿತ್ರರು ಮನುಕುಲಕ್ಕೆ ಇನ್ನೊಬ್ಬರಿಲ್ಲ. ಪ್ರಪಂಚ ಇಂದು ಆಧುನಿಕತೆಯ ಪರದೆಯೊಳಗೆ ನಾಲ್ಕು ಗೋಡೆಗಳ ಮಧ್ಯೆ ಸಿಲುಕಿ ಸೀಮಿತವಾಗುತ್ತಾ ಕಿರಿದಾಗುತ್ತಿದೆ. ಪಕ್ಕದ ಮನೆಯವರೂ ಅಪರಿಚಿತರಾಗುತ್ತಿದ್ದಾರೆ. ಮೊಬೈಲ್ ಟಿವಿ ಮುಂತಾದ ಆವಿಷ್ಕಾರದಿಂದ ಸಂಬಂಧಗಳು ಆವಿಯಾಗುತ್ತಿರುವಾಗಲೂ ಬಾಧೆಗೊಳಗಾಗದ ಬಂಧವೇ ಈ ಸ್ನೇಹ. ಫೇಸ್ ಬುಕ್ - ವಾಟ್ಸಪ್ ಎಂಬಂಥ ಅದೆಂಥ ಮಹಾನ್ ಆವಿಷ್ಕಾರಕ್ಕೆ ಹೋದರೂ ಅಲ್ಲಿ ಸಿಗುವುದು ಅದೇ ಗೆಳೆತನ.


ಯಾರಲೂ ಹೇಳಿಕೊಳಲಾಗದ ಮನಸ್ಸಿನ ಬೇಸರ, ನೋವು, ಕಷ್ಟ, ಸಂತೋಷ, ಪ್ರೀತಿ, ಪ್ರೇಮ, ಸಹಾಯ ಎಲ್ಲವನ್ನೂ ಕೂಡಾ ಹಂಚಿಕೊಳ್ಳುವುದು ಸ್ನೇಹಿತರಲ್ಲಿ.


ಸ್ನೇಹಕ್ಕೆಇಂತವರೇ ಬೇಕು ಎಂದೆನಿಲ್ಲ.ತುಂಬ ದೊಡ್ಡ ಶ್ರೀಮಂತರಿಗೆ ಬಡವರು ಸ್ನೇಹಿತರಿರಬಹುದು.ತುಂಬಾ ವಯಸ್ಸು ಆದವರಿಗೆ ಸಣ್ಣ ಪ್ರಾಯದ ಸ್ನೇಹಿತರು ಇರಬಹುದು. ಹೆಣ್ಣು ಗಂಡು ಎಂಬ ಭೇದ ಇಲ್ಲದೆ ಇರುವುದೇ ಗೆಳೆತನ ....
ಮುಖ್ಯವಾಗಿ ಒಬ್ಬರಿಗೊಬ್ಬರು ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳುವವರು ಬೇಕು ಅಷ್ಟೇ. ಸ್ನೇಹ ಚಿರಾಯುವಾಗಲಿ.


ಗೆಳೆತನಕ್ಕಾಗಿ ಅಲ್ಲೆಲ್ಲೋ ಇರುವ ಸೂರ್ಯ ಕಮಲವ ಅರಳಿಸುವಂತೆ ಅಳಿಸಲಾಗದ ಈ ಸಂಬಂಧ ನಮ್ಮೆಲ್ಲರನ್ನು ಬೆಳೆಸಲಿ.

ಭಂಡಾರಿ ವಾರ್ತೆಯ ಓದುಗರೆಲ್ಲರಿಗೂ ಸ್ನೇಹಿತರ ದಿನದ ಶುಭಾಶಯಗಳು








ವನಿತಾ ಅರುಣ್ ಭಂಡಾರಿ ಬಜ್ಪೆ