BhandaryVarthe Team

BhandaryVarthe Team
Bhandary Varthe Team

Wednesday 3 November 2021

ಬಲಿಪಾಡ್ಯಮಿ ನಂಬಿಕೆಗಳು - ಸುಷ್ಮಾ ಭಂಡಾರಿ, ಇರುವೈಲ್, ಮೂಡಬಿದ್ರಿ

 ನಮ್ಮ ಸನಾತನ ಧರ್ಮದಲ್ಲಿರುವ ಎಲ್ಲಾ ಹಬ್ಬಗಳನ್ನು ಋತುಗಳನ್ನುಪ್ರಕೃತಿಯಲ್ಲಿನ ಬದಲಾವಣೆ, ಮಾಸಗಳು , ತಿಥಿಗಳ ಬದಲಾವಣೆಗಳಿಗೆ ಹೊಂದಿಕೊಂಡು ಅದಕ್ಕೆ ತಕ್ಕಂತೆ ಆಚರಿಸುತ್ತೇವೆ.ದೀಪಾ ವಳಿ ಹಬ್ಬ ಎಂದ ತಕ್ಷಣ ಕಣ್ಣ ಮುಂದೆ ಬರುವುದು ಮನೆಯ ಮುಂದೆ ಉರಿಯುವ ಹಣತೆಯ ಬೆಳಕು . ನಾವು ಪ್ರತಿನಿತ್ಯ ಮನೆಯಲ್ಲಿ ಬೆಳಗ್ಗೆ ಮತ್ತು ಸಾಯಂಕಾಲ ದೀಪ ಬೆಳಗುತ್ತೇವೆ, ದೀಪಾವಳಿ ಹಬ್ಬದಲ್ಲಿ ಹಣತೆ ಬೆಳಕಿಗೆ ಬಹಳ ಪ್ರಾಮುಖ್ಯತೆ ಏಕೆ ಎಂದು ನೋಡಿದರೆ, ನಮ್ಮ ಸಂಸ್ಕೃತಿಯಲ್ಲಿ ದೀಪ ಬೆಳಗುವ ಮೂಲಕವೇ ಯಾವುದೇ ಕೆಲಸವನ್ನು ಆರಂಭಿಸುವುದು .


ಬಲಿಪಾಡ್ಯಮಿ :

ಹಬ್ಬದಲ್ಲಿ ಮೂರನೆಯ ದಿನವನ್ನು ಬಲಿಪಾಡ್ಯಮಿಯಾಗಿ ಆಚರಿಸಲಾಗುತ್ತಿದೆ. ಪೌರಾಣಿಕ ಕಥೆಯ ಪ್ರಕಾರ ಮಹಾವಿಷ್ಣು ಭಕ್ತ ,ದಾನಶೂರ ದೈತ್ಯರಾಜ ಬಲಿ ಚಕ್ರವರ್ತಿಯ ಬಳಿಗೆ ವಾಮನ ಅವತಾರಿಯಾಗಿ ಬಂದ ಮಹಾವಿಷ್ಣು , ಬಲಿಯಿಂದ ಮೂರು ಹೆಜ್ಜೆಊರುವಷ್ಟು ಭೂಮಿಯನ್ನು ದಾನವಾ ಗಿ ಪಡೆದು ಎರಡು ಹೆಜ್ಜೆಗಳಲ್ಲಿಆಕಾಶ-ಭೂಮಿಗಳನ್ನು ಅಳೆದು ಕೊಂಡು ತ್ರಿವಿಕ್ರಮನಾಗಿ ಬೆಳೆದು ಮೂರನೇ ಹೆಜ್ಜೆಯನ್ನು ಬಲಿಯ ಕೋರಿಕೆಯಂತೆ ಅವನ ತಲೆಯ ಮೇಲಿಟ್ಟು ಬಲಿಚಕ್ರವರ್ತಿಯನ್ನು ಪಾತಾಳಕ್ಕೆ ತುಳಿದು ಬಿಡುತ್ತಾನೆ.

 

ಆಗ ಬಲಿಯ ಭಕ್ತಿಯನ್ನು ವಿಷ್ಣು ಪ್ರತಿವರ್ಷ ಒಂದು ದಿನ ಅವನ ಹೆಸರಿನಲ್ಲಿ ಪೂಜೆ ನಡೆಯುವಂತೆ ವರ ನೀಡುತ್ತಾನೆ. ಆ ರೀತಿ ಆಚರಿಸಲ್ಪಡುವ ದಿನವೇ ಬಲಿಪಾಡ್ಯಮಿ. ಅಂದು ಬಲಿ ಚಕ್ರ ವರ್ತಿ ಭೂಲೋಕ ಸಂಚಾರಕ್ಕೆಬರುತ್ತಾನೆಂಬ ನಂಬಿಕೆಯಲ್ಲಿ ಬಲೀಂದ್ರ ಪೂಜೆ ನಡೆಯುತ್ತದೆ.ರೈತರ ಮನೆಯಲ್ಲಿ ಹಣತೆ ಹಚ್ಚಿ ಬಲಿಚಕ್ರವರ್ತಿಯನ್ನು ಕರೆಯುವ ಪದ್ದತಿಯು ಇದೆ.

"ಅಸತೋಮಾ ಸದ್ಗಮಯಾ , ತಮಸೋಮಾ ಜ್ಯೋತಿರ್ಗಮಯ"





 ಸುಷ್ಮಾ ಭಂಡಾರಿ, ಇರುವೈಲ್, ಮೂಡಬಿದ್ರಿ

 

No comments:

Post a Comment