BhandaryVarthe Team

BhandaryVarthe Team
Bhandary Varthe Team

Saturday 26 June 2021

ದಾಂಪತ್ಯ ಜೀವನದ ಬೆಳ್ಳಿ ಹಬ್ಬದ ಸಂಭ್ರಮಾಚರಣೆ ಪೂರೈಸಿದ ಬೆಳ್ತಂಗಡಿ ತಾಲ್ಲೂಕು ಮಡಂತ್ಯಾರು ಶ್ರೀ ಬಾಲಕೃಷ್ಣ ಭಂಡಾರಿ ಮತ್ತು ಶ್ರೀಮತಿ ಶಕುಂತಲಾ ಬಾಲಕೃಷ್ಣ ಭಂಡಾರಿ

 ಬೆಳ್ತಂಗಡಿ ತಾಲ್ಲೂಕು ಮಡಂತ್ಯಾರು ಗುಂಡಿ ಪಲ್ಕೆ ದಿವಂಗತ ಸುಂದರ ಭಂಡಾರಿ ಮತ್ತು ದಿವಂಗತ ನೀಲಮ್ಮ ಸುಂದರ ಭಂಡಾರಿ ದಂಪತಿಯ ಪುತ್ರ ಶ್ರೀ ಬಾಲಕೃಷ್ಣ ಭಂಡಾರಿ ಮಡಂತ್ಯಾರು ಕೋಡ್ಯೇಲು ಮತ್ತು ಮುಲ್ಕಿ ಚಿತ್ರಾಪು ದಿವಂಗತ ವಿಠಲ ಭಂಡಾರಿ ಮತ್ತು ಶ್ರೀಮತಿ ಭವಾನಿ ವಿ. ಭಂಡಾರಿ ದಂಪತಿಯ ಪುತ್ರಿ ಶ್ರೀಮತಿ ಶಕುಂತಲಾ ಇವರು ತಮ್ಮ ದಾಂಪತ್ಯದ ಜೀವನದ ಬೆಳ್ಳಿ ಹಬ್ಬದ ಸಂಭ್ರಮಾಚರಣೆಯನ್ನು ಜೂನ್ ಇಪ್ಪತ್ತ ನಾಲ್ಕನೇ ಗುರುವಾರದಂದು ತಮ್ಮ ಸ್ವಗೃಹದಲ್ಲಿ ಆತ್ಮೀಯ ಬಂಧುಗಳ ಸಮ್ಮುಖದಲ್ಲಿ ಸಾಂಕೇತಿಕವಾಗಿ ಹಾಗೂ ವಿಶಿಷ್ಟವಾಗಿ ಬಂಧು ಮಿತ್ರರ ಗುರುಹಿರಿಯರ ಹಾಗೂ ಕುಟುಂಬಸ್ಥರ ಶುಭ ಹಾರೈಕೆಯೊಂದಿಗೆ ಆಚರಿಸಿದರು .

ಶ್ರೀ ಬಾಲಕೃಷ್ಣ ಭಂಡಾರಿ ಅವರು ಪ್ರಗತಿಪರ ಕೃಷಿಕರಾಗಿದ್ದ ಮಡಂತ್ಯಾರು ಹಾಲು ಉತ್ಪಾದಕರ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ಕೃತಕ ಗರ್ಭಧಾರಣೆಯ ನಿರ್ವಾಹಕರಾಗಿ ವೃತ್ತಿ ಜೀವನ ನಡೆಸುತ್ತಿದ್ದಾರೆ .ಸದಾ ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ ಬಾಲಕೃಷ್ಣ ಭಂಡಾರಿ ಬೆಳ್ತಂಗಡಿ ಭಂಡಾರಿ ಸಮಾಜ ಸಂಘದ ಉಪಾಧ್ಯಕ್ಷರಾಗಿರುತ್ತಾರೆ ಮತ್ತು ಮಡಂತ್ಯಾರು ರೋಟರಿ ಕ್ಲಬ್ಬಿನ ಸದಸ್ಯರಾಗಿ ಸೇವೆ ಸಲ್ಲಿಸಿರುತ್ತಾರೆ. ದಂಪತಿಗಳ ಮಕ್ಕಳಾದ ಮಂಗಳೂರಿನ ವಾಮಂಜೂರು ಸೇಂಟ್ ಮೇರಿಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಇ.ವ್ಯಾಸಂಗ ಮಾಡುತ್ತಿರುವ ಕಾರ್ತಿಕ್ ಬಿ ಭಂಡಾರಿ ಮತ್ತು ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ದ್ವಿತೀಯ ಪಿಯುಸಿ ಶಿಕ್ಷಣ ಪಡೆಯುತ್ತಿರುವ ಕೃತಿಕಾ ಬಿ. ಭಂಡಾರಿ .

 

ದಂಪತಿಗಳ ದಾಂಪತ್ಯ ಜೀವನವು ಇನ್ನಷ್ಟು ಸುಖ ಸಂತೋಷ ಸಕಲೈಶ್ವರ್ಯದಿಂದ ನೂರಾರು ಕಾಲ ನೆಮ್ಮದಿಯ ದಾಂಪತ್ಯ ಜೀವನವನ್ನು ಮುನ್ನಡೆಸಲು ಭಗವಂತನ ಅನುಗ್ರಹ ಸದಾ ಇರಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯ ಹಾರ್ದಿಕ ಹಾರ್ದಿಕ ಶುಭ ಹಾರೈಕೆ.

No comments:

Post a Comment