BhandaryVarthe Team

BhandaryVarthe Team
Bhandary Varthe Team

Friday 4 June 2021

ಕಾರ್ಕಳ ತಾಲ್ಲೂಕು ಪಳ್ಳಿ ಗ್ರಾಮದ ದಾದಬೆಟ್ಟು ಎಂಬಲ್ಲಿನ ಶ್ರೀಮತಿ ಅಪ್ಪಿ ಭಂಡಾರಿ ವಿಧಿವಶ

 ಕಾರ್ಕಳ ತಾಲೂಕು ಪಳ್ಳಿ ಗ್ರಾಮದ ದಾದ ಬೆಟ್ಟು ಕಲಾನಿಕೇತನ ದಿವಂಗತ ಶ್ರೀ ಎಲ್ಲಪ್ಪ ಭಂಡಾರಿ ಅವರ ಧರ್ಮಪತ್ನಿಶ್ರೀಮತಿ ಅಪ್ಪಿ ಭಂಡಾರಿ (89 ವರ್ಷ ) ಯವರು ಕಳೆದ ಒಂದು ವಾರದ ಅಸೌಖ್ಯದಿಂದ ಉಡುಪಿ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಶುಕ್ರವಾರ ಮುಂಜಾನೆ ಚಿಕಿತ್ಸೆಗೆ ಸ್ಪಂದಿಸದೆ ಇಹಲೋಕ ತ್ಯಜಿಸಿದರು

ಪುತ್ರರಾದ ಶ್ರೀ ವಸುಧೇಶ ಭಂಡಾರಿ ಪಳ್ಳಿ ದಾದಬೆಟ್ಟು , ಬೆಳುಪು ಸರಕಾರಿ ಪ್ರೌಢ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಶ್ರೀ ಹಿತೇಶ್ ಭಂಡಾರಿ ಮತ್ತು
ಶ್ರೀ ರವಿರಾಜ್ ಭಂಡಾರಿ ಕುಂಟಾಡಿ ಕಾರ್ಕಳ ಪುತ್ರಿಯರಾದ ಶ್ರೀಮತಿ ವಾರಿಜ ಶೇಖರ್ ಭಂಡಾರಿ ಕದ್ರಿ ಮಂಗಳೂರು ಹಾಗೂ ಶ್ರೀಮತಿ ವಸುಮತಿ ದಾಮೋದರ ಭಂಡಾರಿ ಮುಂಬಯಿ ಮತ್ತು ಸೊಸೆಯಂದಿರು ಅಳಿಯ ಹಾಗೂ ಮೊಮ್ಮಕ್ಕಳು ಸಹೋದರರಾದ ಶ್ರೀ ಸದಾಶಿವ ಭಂಡಾರಿ ಪಳ್ಳಿ ಕಾರ್ಕಳ ಶ್ರೀ ಆನಂದ ಭಂಡಾರಿ ಮುಂಬಯಿ ಸಹೋದರಿಯರಾದ ಶ್ರೀಮತಿ ಕಿಟ್ಟಿ ವಾಸು ಭಂಡಾರಿ ಬಜಗೋಳಿ ಕಾರ್ಕಳ , ಶ್ರೀಮತಿ ಶಾರದ ಭಂಡಾರಿ ಉಡುಪಿ ಹಾಗೂ ಬಂಧು ಮಿತ್ರರು ಕುಟುಂಬಸ್ಥರನ್ನು ಅಗಲಿದ್ದಾರೆ.

ಮಕ್ಕಳು ಮತ್ತು ದುಃಖತಪ್ತ ಕುಟುಂಬಕ್ಕೆ ಇವರ ಅಗಲುವಿಕೆಯನ್ನು ಸಹಿಸುವ ಶಕ್ತಿಯು ಭಗವಂತನು ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯ ಪ್ರಾರ್ಥನೆ.

-- ಭಂಡಾರಿ ವಾರ್ತೆ

No comments:

Post a Comment