BhandaryVarthe Team

BhandaryVarthe Team
Bhandary Varthe Team

Wednesday 30 June 2021

ದಾಂಪತ್ಯ ಜೀವನದ ಸಪ್ತಪದಿ ತುಳಿದ ಕುಂದಾಪುರ ತಾಲ್ಲೂಕಿನ ಬೆಳ್ವೆ ಚಿ॥ ಪ್ರಣೀತ್ ಮತ್ತು ಕಡಬ ತಾಲ್ಲೂಕಿನ ಕೆದಿಲ ಚಿ॥ ಸೌ॥ ಶ್ರುತಿ

 ಕುಂದಾಪುರ ತಾಲೂಕು ಬೆಳ್ವೆ ದಿವಂಗತ ನಾರಾಯಣ ಭಂಡಾರಿ ಮತ್ತು ಶ್ರೀಮತಿ ಉಷಾ ಎನ್. ಭಂಡಾರಿ ದಂಪತಿಯ ಪುತ್ರ

ಚಿ.ರಾ.ಪ್ರಣೀತ್

ಕಡಬ ತಾಲೂಕು ರಾಮಕುಂಜ ಗ್ರಾಮದ ಕೆದಿಲ ಶ್ರೀಮತಿ ಮತ್ತು ಶ್ರೀ ಕೃಷ್ಣ ಭಂಡಾರಿ ದಂಪತಿಯ ಪುತ್ರಿ

ಚಿ.ಸೌ. ಶ್ರುತಿ

ದಾಂಪತ್ಯ ಜೀವನದ ಸಪ್ತಪದಿಯನ್ನು ಜೂನ್ 28 ನೇ ಸೋಮವಾರದಂದು ರಾಮಕುಂಜ ಗ್ರಾಮದ ಕೆದಿಲ ಶ್ರೀ ಕೃಷ್ಣ ಭಂಡಾರಿಯವರ ನಿವಾಸದಲ್ಲಿ ಕೊರೋನಾ ಕಟ್ಟುನಿಟ್ಟಿನ ಪಾಲನೆಯೊಂದಿಗೆ ಆತ್ಮೀಯ ಬಂಧು ಮಿತ್ರರ ಶುಭಾಶೀರ್ವಾದದೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

 


ನವದಂಪತಿಯ ದಾಂಪತ್ಯ ಜೀವನವು ಸುಖ ಶಾಂತಿ ನೆಮ್ಮದಿಯ ಸಕಲೈಶ್ವರ್ಯದೊಂದಿಗೆ ನೂರಾರು ಕಾಲ ಸಂಸಾರ ಮುನ್ನಡೆಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಶುಭ ಹಾರೈಸುತ್ತದೆ.

No comments:

Post a Comment