BhandaryVarthe Team

BhandaryVarthe Team
Bhandary Varthe Team

Sunday 13 June 2021

ಉಡುಪಿ ಕಾಡಬೆಟ್ಟು ಶ್ರೀಮತಿ ಗಿರಿಜಾ ಟೀಚರ್ ವಿಧಿವಶ

 ಕಾರ್ಕಳ ದಿವಂಗತ ಗೋಪಾಲ ಕಷ್ಣ ಭಂಡಾರಿ ಅವರ ಧರ್ಮಪತ್ನಿ ಶ್ರೀಮತಿ ಗಿರಿಜಾ ಟೀಚರ್ (85 ವರ್ಷ) ಜೂನ್ 12 ನೇ ಶನಿವಾರದಂದು ಮನೆಯಲ್ಲಿ ಸ್ವಲ್ಪ ಆರೋಗ್ಯದಲ್ಲಿ ಏರುಪೇರಾಗಿ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದರು.

ಪಡುಬಿದ್ರೆ ,ಎರ್ಮಾಳು, ಉಚ್ಚಿಲ ಮತ್ತು ಮೂಳೂರು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಹಾಗೂ ಭಢ್ತಿಗೊಂಡು ಮುಖ್ಯಶಿಕ್ಷಕರಾಗಿ ಒಟ್ಟು ಸುಮಾರು 42 ವರ್ಷಗಳ ಸೇವೆ ಸಲ್ಲಿಸಿದರೆ.ಇವರ ಕುಟುಂಬದಲ್ಲಿ ಹೆಚ್ಚಿನವರು ಶಿಕ್ಷಣ ಇಲಾಖೆ ಸೇವೆ ಸಲ್ಲಿಸಿದ್ದು ವಿಶೇಷವಾಗಿದೆ.

ಇವರ ಪುತ್ರ ರಘುವೀರ ಭಂಡಾರಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ಬಂಟ್ವಾಳ ತಾಲ್ಲೂಕಿನ ವಿಟ್ಲ ಸರಕಾರಿ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಯಾಗಿರುತ್ತಾರೆ ಹಾಗೂ ಪುತ್ರಿ ಸುಜಾತ ಕೆ. ಕೂಡಾ ಸರಕಾರಿ ಶಾಲೆಗಳಲ್ಲಿ ಶಿಕ್ಷಕಿಯಾಗಿ ಗಂಗೊಳ್ಳಿಯಲ್ಲಿ ಮುಖ್ಯ ಶಿಕ್ಷಕಿಯಾಗಿ ಇತ್ತೀಚೆಗೆ ನಿವೃತ್ತಿಯಾಗಿರುತ್ತಾರೆ ಅಳಿಯ ಸೊಸೆ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

ಗಿರಿಜಾ ಟೀಚರ್ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಿ ದುಃಖತಪ್ತ ಕುಟುಂಬಕ್ಕೆ ಇವರ ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯ ಪ್ರಾರ್ಥನೆ.

-ಭಂಡಾರಿ ವಾರ್ತೆ

No comments:

Post a Comment