BhandaryVarthe Team

BhandaryVarthe Team
Bhandary Varthe Team

Saturday 8 May 2021

ಮಂಗಳೂರು ಶೇಡಿಗುರಿ ಚಂದ್ರಶೇಖರ ಬಿ .ಎಸ್ ಮಡಿಕೇರಿ ವಿಧಿವಶ

 ಮಡಿಕೇರಿ ದಿವಂಗತ ಶ್ರೀ ಟಿ. ಕೆ. ಸುಬ್ಬಯ್ಯ ಭಂಡಾರಿ ಮತ್ತು ದಿವಂಗತ ಶ್ರೀಮತಿ ದೇವಕಿ ದಂಪತಿಯ ಪುತ್ರ ಮಂಗಳೂರು ಶೇಡಿಗುರಿ ಚಂದ್ರಶೇಖರ ಬಿ.ಎಸ್

( 62 ವರ್ಷ ) ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೇ 8 ರ ಶನಿವಾರ ಮುಂಜಾನೆ ನಿಧನರಾದರು.

ಚಂದ್ರಶೇಖರ ಬಿ.ಎಸ್ ಬಾಟಾ ಸಂಸ್ಥೆಯಲ್ಲಿ ಮೇನೇಜರ್ ಆಗಿ ಮೂವತ್ತೈದು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಯಾಗಿರುತ್ತಾರೆ.

ದಿವಂಗತರು ಸಹೋದರರಾದ ಶ್ರೀ ಹರಿಶ್ಚಂದ್ರ ಮಡಿಕೇರಿ , ಕಚ್ಚೂರು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಮಾಜಿ ಅಧ್ಯಕ್ಷ ಸತೀಶ್ ಬಿ ಎಸ್ ಪುತ್ತೂರು ಮತ್ತು ಸಹೋದರಿ ಶ್ರೀಮತಿ ಸುಜಾತ ಹರೀಶ್ ಕಾವೂರು , ಪತ್ನಿ ಶ್ರೀಮತಿ ಪೂರ್ಣಿಮಾ ಚಂದ್ರಶೇಖರ್ , ಪುತ್ರ ನಿಶ್ಚಲ್ ಕುಮಾರ್ , ಪುತ್ರಿ ಡಾ॥ ಶ್ರೀನಿಧಿ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ .
 ಪತ್ನಿ ಮಕ್ಕಳು ಹಾಗೂ ಕುಟುಂಬಸ್ಥರಿಗೆ ಇವರ ಅಗಲುವಿಕೆಯ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯ ಪ್ರಾರ್ಥನೆ.

-ಭಂಡಾರಿ ವಾರ್ತೆ

No comments:

Post a Comment