BhandaryVarthe Team

BhandaryVarthe Team
Bhandary Varthe Team

Tuesday 13 April 2021

ಸಚಿವ ಕೋಟಾ ಶ್ರೀನಿವಾಸ್ ಪೂಜಾರಿಯವರ ಆಪ್ತ ಸಹಾಯಕ ಪರಮೇಶ್ವರ್ ಭಂಡಾರಿಗೆ ಚಿನ್ನದ ಪದಕ .

 ಗದಗ ಗ್ರಾಮೀಣ ವಿವಿ ಪ್ರಾಂಗಣದಲ್ಲಿತಾರೀಕು ಏಪ್ರಿಲ್ 10 ರಂದು ನಡೆದ ರಾಜ್ಯ ಗ್ರಾಮೀಣಾಭಿವೃದ್ಧಿಮತ್ತುಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಲ್ಲಿ ನಡೆದ ಪ್ರಥಮ ಘಟಿಕೋತ್ಸವದಲ್ಲಿ ಹಿಂದುಳಿದ ವರ್ಗಗಳ ಮತ್ತು ಮುಜರಾಯಿ ಇಲಾಖೆ ಸಚಿವ , ದಕ್ಷಿಣ ಕನ್ನಡ ಉಸ್ತುವಾರಿ ಮಂತ್ರಿ ಕೋಟಾ ಶ್ರೀನಿವಾಸ್ ಪೂಜಾರಿಯವರ ಆಪ್ತ ಸಹಾಯಕ ಪರಮೇಶ್ವರ್ ಭಂಡಾರಿ ಯವರಿಗೆ ಎಂ ಕಾಂ ನಲ್ಲಿಪಡೆದ ಪ್ರಥಮ ಸ್ಥಾನಕ್ಕಾಗಿ ಚಿನ್ನದ ಪದಕದ ಜೊತೆ ಪ್ರಶಸ್ತಿ ಪ್ರದಾನ ನೀಡಿ ಗೌರವಿಸಲಾಯಿತು.

ವಿವೇಕಾನಂದ ಯೂಥ್ ಮೂವ್ ಮೆಂಟ್ ಮತ್ತು ಮೈಸೂರ್ ನ ಗ್ರಾಸ್ ರೂಟ್ಸ್ ರಿಸರ್ಚ್ ಮತ್ತು ಅಡ್ವೊಕೆಸಿ ಮೂವ್ ಮೆಂಟ್ ನ ಸಂಸ್ಥಾಪಕ ಅಧ್ಯಕ್ಷ ಡಾ. ಆರ್ . ಬಾಲಸುಬ್ರಹ್ಮಣ್ಯಂ, ಗ್ರಾವಿವಿ ಕುಲಪತಿ ಪ್ರೊ .ವಿಷ್ಣುಕಾಂತ್ ಎಸ್ ಚಟಪಲ್ಲಿ,ವಿಶ್ವವಿದ್ಯಾಲಯದ ಉಪಕುಲಪತಿಯೂ ಆದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ. ಎಸ್. ಈಶ್ವರಪ್ಪಉಪಸ್ಥಿತರಿದ್ದರು.

ಕೆ. ಎಸ್. ಈಶ್ವರಪ್ಪನೇತೃತ್ವದಲ್ಲಿ ಪದವಿ ಸಮಾರಂಭ ನಡೆಯಿತು.

ಮೂಡಬಿದ್ರೆ ಅಲಂಗಾರು ಉಳಿಯಮನೆ ಶ್ರೀಮತಿ ಪದ್ಮಾವತಿ ಭಂಡಾರಿ ಮತ್ತು ದಿವಂಗತ ಸದಾಶಿವ ಭಂಡಾರಿ ದಂಪತಿಯ 7 ಜನ ಮಕ್ಕಳಲ್ಲಿ 4 ನೇಯವರಾಗಿ ಜನಿಸಿದ ಪರಮೇಶ್ವರ್ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮೂಡುಬಿದಿರೆಯಲ್ಲಿ, ಪದವಿ ಶಿಕ್ಷಣ ಮಂಗಳೂರಿನ ಸಂತ ಅಲೋಶಿಯಸ್ ಸಂಧ್ಯಾ ಕಾಲೇಜಿನಲ್ಲಿ ಪಡೆದರು.

ನಂತರ ಬೆಂಗಳೂರಿನಲ್ಲಿರುವ ವಿ ಗಾರ್ಡ್ ಗ್ರೂಪಿನ ವಂಡರ್ ಲಾದಲ್ಲಿ , ಮಂಗಳೂರಿನಲ್ಲಿರುವ ರಿಲಯನ್ಸ್ ಗ್ರೂಪಿನ 92.7 ಬಿಗ್ ಎಫ್ ಎಂ ರೇಡಿಯೋದಲ್ಲಿ ಕೆಲಸ ನಿರ್ವಹಿಸಿದರು.

ಏಪ್ರಿಲ್ 2010ರಲ್ಲಿಮಂಗಳೂರು ತಾಲೂಕಿನ ಮಂಜನಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿಅಧಿಕಾರಿಯಾಗಿ (ಪಿ ಡಿ ಓ) ಕರ್ನಾಟಕ ಸರಕಾರದಿಂದ ನೇಮಕ ಗೊಂಡ ಪರಮೇಶ್ವರ್ 2017 ರವರೆಗೆ ಮಂಜನಾಡಿ ಗ್ರಾಮ ಪಂಚಾಯತ್ ನಲ್ಲಿ ಸೇವೆ ಮಾಡಿ ಸರಕಾರದ ಮೂಲಕ ಉನ್ನತ ಶಿಕ್ಷಣಕ್ಕಾಗಿ ಗದಗ್ ಗೆ ತೆರಳುತ್ತಾರೆ.

ಎರಡು ವರ್ಷದ ಉನ್ನತ ಶಿಕ್ಷಣದ ನಂತರ ಮತ್ತೆ ಹಳೆಯಂಗಡಿ ಗ್ರಾಮ ಪಂಚಾಯತ್ ಅಭಿವೃದ್ಧಿಅಧಿಕಾರಿಯಾಗಿ 2019 ರ ಆಗಸ್ಟ್ ನಲ್ಲಿ ನೇಮಕಗೊಳ್ಳುತ್ತಾರೆ. 

2019 ರ ನವೆಂಬರ್ ನಲ್ಲಿ ಪರಮೇಶ್ವರ್ ರನ್ನು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರ ಆಪ್ತ ಸಹಾಯಕರಾಗಿ ಸಚಿವರ ಮಂಗಳೂರು ಕಚೇರಿಯಲ್ಲಿ ಕರ್ತವ್ಯಕ್ಕೆ ನೇಮಕಗೊಳಿಸಿ ಸರಕಾರ ಆದೇಶಿಸಿದೆ.

ಸ್ನಾತಕ್ಕೋತ್ತರ ಪದವಿಯಲ್ಲಿ ಪ್ರಥಮ ಸ್ಥಾನ ಪಡೆದ ಪರಮೇಶ್ವರ್ಗೆ ಪದವಿ ಜೊತೆಯಲ್ಲಿ ಚಿನ್ನದ ಪದಕ ದೊರಕಿರುವುದು ಸಮಾಜಕ್ಕೊಂದು ಹೆಮ್ಮೆಯ ಸಂಗತಿ.

ಇವರ ಪ್ರತಿಯೊಂದು ಕೆಲಸದಲ್ಲಿ ಧರ್ಮಪತ್ನಿ ಶ್ರೀಮತಿ ಆಶಿಕಾ ಪರಮೇಶ್ವರ್ ಪ್ರೋತ್ಸಾಹ ನೀಡುತ್ತಿದ್ದಾರೆ. ಪ್ರಸ್ತುತ ಇವರು ಮಂಗಳೂರಿನ ಮಾಡೂರಿನಲ್ಲಿ ನೆಲೆಸಿರುತ್ತಾರೆ.


ಅವರ ಮುಂದಿನ ಭವಿಷ್ಯವು ಉಜ್ವಲವಾಗಲಿ, ಅವರು ಸೇವೆ ಮಾಡುವ ಕ್ಷೇತ್ರದಲ್ಲಿ ನಿಷ್ಠೆ ಮತ್ತು ಪ್ರಾಮಾಣಿಕವಾಗಿ ಕೆಲಸ ಮಾಡಿ ಜಿಲ್ಲೆ ಮತ್ತು ಭಂಡಾರಿ ಸಮಾಜದ ಮನ್ನಣೆ ಮತ್ತು ಕೀರ್ತಿಗೆ ಪಾತ್ರರಾಗಲಿ ಎಂದು ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿ ವಾರ್ತೆ ಈ ಸಂದರ್ಭದಲ್ಲಿ ಶುಭ ಹಾರೈಸುತ್ತದೆ .

ವರದಿ :ಕುಶಲ್ ಕುಮಾರ್,ಬೆಂಗಳೂರು

1 comment:

  1. ಶುಭವಾಗಲಿ‌ ಅವರ ಸಾಧನೆಗೆ ಇನ್ನೂ ಹೆಚ್ಚಿನ ಅವಕಾಶ ದೊರೆತು‌ ಅವರಿಂದ ಸಮಾಜ ಇನ್ನೂ ಹೆಚ್ಚಿನ ಸೇವೆ ಪಡೆಯುವಂತಾಗಲಿ......

    ReplyDelete